Advertisement

Ranji : ಮುಂಬಯಿ ತಂಡಕ್ಕೆ ಶ್ರೇಯಸ್‌ ಅಯ್ಯರ್‌ ಸೇರ್ಪಡೆ

11:20 PM Jan 09, 2024 | Team Udayavani |

ಮುಂಬಯಿ: ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಅವರನ್ನು ಮುಂಬಯಿ ರಣಜಿ ತಂಡಕ್ಕೆ ಸೇರಿಸಿ ಕೊಳ್ಳಲಾಗಿದೆ. ಆಂಧ್ರಪ್ರದೇಶ ವಿರುದ್ಧದ ಈ ಮುಖಾಮುಖಿಗಾಗಿ ಮಂಗಳವಾರ ತಂಡವನ್ನು ಪ್ರಕಟಿಸಲಾಯಿತು. ಈ ಪಂದ್ಯ ಜ. 12ರಿಂದ 14ರ ತನಕ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ “ಶರದ್‌ ಪವಾರ್‌ ಕ್ರಿಕೆಟ್‌ ಅಕಾಡೆಮಿ ಗ್ರೌಂಡ್‌’ನಲ್ಲಿ ನಡೆಯಲಿದೆ.

Advertisement

29 ವರ್ಷದ ಶ್ರೇಯಸ್‌ ಅಯ್ಯರ್‌ ಮುಂಬಯಿ ಪರ ಕೊನೆಯ ಸಲ ರಣಜಿ ಪಂದ್ಯವಾಡಿದ್ದು 2018ರಷ್ಟು ಹಿಂದೆ. ಮೊನ್ನೆ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಿದ್ದರು. ಆದರೆ ಗಳಿಸಿದ್ದು 41 ರನ್‌ ಮಾತ್ರ.

ಅಜಿಂಕ್ಯ ರಹಾನೆ ಮುಂಬಯಿ ತಂಡದ ನಾಯಕರಾಗಿದ್ದಾರೆ. ಆದರೆ ಗಾಯಾಳಾದ ಕಾರಣ ಬಿಹಾರ ವಿರುದ್ಧ ಆಡಿರಲಿಲ್ಲ. ಶಮ್ಸ್‌ ಮುಲಾನಿ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯವನ್ನು ಮುಂಬಯಿ ಇನ್ನಿಂಗ್ಸ್‌ ಹಾಗೂ 51 ರನ್ನುಗಳಿಂದ ಜಯಿಸಿತ್ತು.

ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್‌ ಅಯ್ಯರ್‌, ಜಾಯ್‌ ಬಿಷ್ಟಾ, ಭೂಪೆನ್‌ ಲಾಲ್ವಾನಿ, ಅಮೋಘ ಭಟ್ಕಳ್‌, ಸುವೇದ್‌ ಪಾರ್ಕರ್‌, ಪ್ರಸಾದ್‌ ಪವಾರ್‌, ಹಾರ್ದಿಕ್‌ ತಮೋರೆ, ಶಮ್ಸ್‌ ಮುಲಾನಿ, ತನುಷ್‌ ಕೋಟ್ಯಾನ್‌, ಅಥರ್ವ ಅಂಕೋಲೆಕರ್‌, ಮೋಹಿತ್‌ ಅವಸ್ಥಿ, ಧವಳ್‌ ಕುಲಕರ್ಣಿ, ರಾಯ್‌ಸ್ಟನ್‌ ಡಾಯಸ್‌, ಸಿಲ್ವೆಸ್ಟರ್‌ ಡಿ’ಸೋಜ.

Advertisement

Udayavani is now on Telegram. Click here to join our channel and stay updated with the latest news.

Next