Advertisement

ರಸ್ತೆಗಳಿಗೆ ರಂಗೋಲಿ; ಕಾಂಗ್ರೆಸ್‌ ಪ್ರತಿಭಟನೆ

10:36 AM Apr 28, 2022 | Team Udayavani |

ಹುಬ್ಬಳ್ಳಿ: ಮೂಲ ಸೌಲಭ್ಯ ಕಲ್ಪಿಸುವಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಿಫಲರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ವತಿಯಿಂದ ರಸ್ತೆಗಳಿಗೆ ರಂಗೋಲಿಯಿಂದ ಅಲಂಕಾರ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

Advertisement

ಹಲವು ಸಮಸ್ಯೆಗಳ ಕುರಿತು ಸ್ಥಳೀಯರು ಶಾಸಕರು ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಹೋರಾಟಗಳನ್ನು ಕೂಡ ಮಾಡಲಾಲಾಗಿದೆ. ಆದರೆ ಜನರ ಸಮಸ್ಯೆಗಳಿಗೆ ಕಿವಿಗೊಡುವ ಕಾಳಜಿಯಿಲ್ಲದಂತಾಗಿದೆ. ಹೀಗಾಗಿ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಗಮನ ಸೆಳೆಯುವ ನಿಟ್ಟಿನಲ್ಲಿ ರಂಗೋಲಿ ಬಿಡಿಸಿ ಪ್ರತಿಭಟಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ ಮಾತನಾಡಿ, ಅವರು ವಾರ್ಡ್‌ 58ರ ಪ್ರತಿಷ್ಠಿತ ಓಂ ಹೋಟೆಲ್‌ ಎದುರಿನ ಕೇಕ್‌ ಕಾರ್ನ್ ದಿಂದ ಸೈಂಟ್‌ ಮೈಕಲ್‌ ಸ್ಕೂಲ್‌ ಹತ್ತಿರದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅದನ್ನು ಸರಿಪಡಿಸಬೇಕಾದ ಅಧಿಕಾರಿಗಳು ಇತ್ತ ಕಣ್ತೆರೆದು ನೋಡುತ್ತಿಲ್ಲ. ಜತೆಗೆ ಈ ಭಾಗದ ಶಾಸಕರು ಕಣ್ತೆರೆದು ನೋಡುತ್ತಿಲ್ಲ. ತಾವು ಓಡಾಡುವ ರಸ್ತೆಗಳನ್ನು ಹೈಟೆಕ್‌ ಮಾದರಿಯಲ್ಲಿ ಮಾಡಿಕೊಂಡಿದ್ದಾರೆ. ಜನರ ಸಾಮಾನ್ಯ ರಸ್ತೆಗಳ ದುಸ್ಥಿತಿ ಅವರಿಗೆ ಕಾಣುತ್ತಿಲ್ಲ ಎಂದು ಆರೋಪಿಸಿದರು.

ಮುಖಂಡರಾದ ಸಂತೋಷ ಚಲವಾದಿ, ಹೂವಪ್ಪ ದಾಯಗೋಡಿ, ತೇಜರಾಜ್‌ ಜೈನ್‌, ಪ್ರೀತೇಶ ಪಾಲ್ಗೊಟ, ಸುರೇಶ, ಅಶೋಕ ನರಗುಂದ ಸೇರಿದಂತೆ ಸ್ಥಳೀಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next