Advertisement

ಮುಂಬಯಿ ರಣಜಿ: ಅಯ್ಯರ್‌ ನಾಯಕ

06:00 AM Oct 27, 2018 | Team Udayavani |

ಮುಂಬಯಿ: ಪ್ರಸಕ್ತ ರಣಜಿ ಋತುವಿನ ಮೊದಲ ಪಂದ್ಯಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅವರನ್ನು ಮುಂಬಯಿ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಬೌಲರ್‌ ಧವಳ್‌ ಕುಲಕರ್ಣಿ ಉಪನಾಯಕರಾಗಿರುವರು.

Advertisement

ಮುಂಬಯಿ ತನ್ನ ಮೊದಲ ಪಂದ್ಯದಲ್ಲಿ ರೈಲ್ವೇಸ್‌ ತಂಡವನ್ನು ಎದುರಿಸಲಿದ್ದು, ನ. ಒಂದರಿಂದ ಈ ಪಂದ್ಯ ಹೊಸದಿಲ್ಲಿಯಲ್ಲಿ ಆರಂಭವಾಗಲಿದೆ. ದೇವಧರ್‌ ಟ್ರೋಫಿ ಪಂದ್ಯದ ವೇಳೆ ಗಾಯಾಳಾದ ಪೃಥ್ವಿ ಶಾ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಪೂರ್ತಿ ಗುಣಮುಖರಾದ ಬಳಿಕ ಶಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಮುಂಬಯಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರ್ಕರ್‌ ಹೇಳಿದರು.

ಮುಂಬಯಿ ತಂಡ: ಶ್ರೇಯಸ್‌ ಅಯ್ಯರ್‌ (ನಾಯಕ), ಧವಳ್‌ ಕುಲಕರ್ಣಿ, ಸಿದ್ದೇಶ್‌ ಲಾಡ್‌, ಜಾಯ್‌ ಬಿಸ್ತಾ, ಸೂರ್ಯಕುಮಾರ್‌ ಯಾದವ್‌, ಆಶಯ್‌ ಸರ್ದೇಸಾಯಿ, ಆದಿತ್ಯ ತಾರೆ, ಏಕನಾಥ್‌ ಕೇರ್ಕರ್‌, ಶಿವಂ ದುಬೆ, ಆಕಾಶ್‌ ಪಾರ್ಕರ್‌, ಕರ್ಶ್‌ ಕೊಠಾರಿ, ಶಮ್ಸ್‌ ಮುಲಾನಿ, ಅಖೀಲ್‌ ಹೆರ್ವಾಡ್ಕರ್‌, ತುಷಾರ್‌ ದೇಶಪಾಂಡೆ, ರಾಯ್‌ಸ್ಟನ್‌ ಡಯಾಸ್‌.

Advertisement

Udayavani is now on Telegram. Click here to join our channel and stay updated with the latest news.

Next