Advertisement

ರಮೇಶ್‌ ಪಕ್ಷ ಬಿಡಲ್ಲ:ಸಚಿವ ತುಕಾರಾಂ 

12:50 AM Jan 03, 2019 | Team Udayavani |

ಬಳ್ಳಾರಿ: ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ಕಾಂಗ್ರೆಸ್‌ನಲ್ಲೇ ಇದ್ದು,ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನ ಆಸ್ತಿ. ನಾಲ್ಕು ಬಾರಿ ಕಾಂಗ್ರೆಸ್‌ ನಿಂದ ಬಿ ಫಾರಂ ಪಡೆದು ನಾಲ್ಕು ಬಾರಿಯೂ ಶಾಸಕರಾಗಿದ್ದಾರೆ. ಎರಡು ಬಾರಿ ಸಚಿವರಾಗಿ ಕಾರ್ಯ
ನಿರ್ವಹಿಸಿದ್ದಾರೆ. ಹಲವಾರು ಹೊಸ ಕಾರ್ಯಕ್ರಮಗಳನ್ನು ರೂಪಿಸಿರುವ ಅವರು ಪಕ್ಷ ಬಿಡೋದಿಲ್ಲ ಎಂದರು.

ರಮೇಶ ವಾಲ್ಮೀಕಿ ಸಮುದಾಯಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ನಮ್ಮ ನಾಯಕರೂ ಹೌದು. ಪಕ್ಷದ ಹೈಕಮಾಂಡ್‌, ರಾಜ್ಯದ ನಾಯಕರು ಅವರ ಮನವೊಲಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next