Advertisement

ಜಾರಕಿಹೊಳಿ ಕೇಸ್ ಗೆ ಹೊಸ ತಿರುವು: ಸರ್ಕಾರ, ಪೊಲೀಸ್ ಆಯುಕ್ತರಿಗೆ‌ ಹೈಕೋರ್ಟ್ ನೋಟಿಸ್

02:02 PM Jun 08, 2021 | Team Udayavani |

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್.ಐ.ಟಿ) ದ ವಿರುದ್ಧವೇ ಸಿಡಿಯಲ್ಲಿದ್ದ ಯುವತಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

Advertisement

ಎಸ್.ಐ.ಟಿ ತನಿಖೆ ಸರಿಯಾಗಿ ನಡೆದಿಲ್ಲ. ಆದ್ದರಿಂದ ಎಸ್.ಐ.ಟಿ ರಚನೆ ಮಾಡಿರುವುದನ್ನು ಮತ್ತು ಅದು ಇದುವರೆಗೆ ನಡೆಸಿದ ತನಿಖೆಯನ್ನು ರದ್ದುಪಡಿಸಿ, ಹೊಸ ತನಿಖಾ ತಂಡ ರಚಿಸುವಂತೆ ಅರ್ಜಿಯಲ್ಲಿ ಯುವತಿ ಮನವಿ ಮಾಡಿದ್ದಾಳೆ.

ಈ ಬಗ್ಗೆ ಹೈಕೋರ್ಟ್, ಸರ್ಕಾರ ಮತ್ತು ಪೊಲೀಸ್ ಆಯುಕ್ತರಿಗೆ‌ ನೋಟಿಸ್ ಜಾರಿಗೊಳಿಸಿದೆ.

ಇದನ್ನೂ ಓದಿ:ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಅಂತಿಮ ತೀರ್ಪು ಪ್ರಕಟಿಸಿದ ಉಡುಪಿ ಜಿಲ್ಲಾ ನ್ಯಾಯಾಲಯ

ರಮೇಶ್ ಜಾರಕಿಹೊಳಿ ಮತ್ತು ಯುವತಿಯಿದ್ದ ಸಿಡಿ ಬಹಿರಂಗವಾದ ಬಳಿಕ ಹಲವು ಬೆಳವಣಿಗೆಗಳು ನಡೆದಿದೆ. ಇತ್ತೀಚೆಗೆ ರಮೇಶ್ ಜಾರಕಿಹೊಳಿಯವರು ಆ ಸಿಡಿಯಲ್ಲಿ ತಾನೇ ಇದ್ದೆ. ಸಮ್ಮತಿಯ ಲೈಂಗಿಕ ಕ್ರಿಯೆಯಲ್ಲಿ ನಾವು ಭಾಗಿಯಾಗಿದ್ದೆವು ಎಂದು ಹೇಳಿದ್ದರು. ಇದೀಗ ಯುವತಿಯ ಈ ನಡೆ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next