Advertisement

ಗಲಭೆ ವಿಚಾರ : ಬಿಜೆಪಿ-ಕಾಂಗ್ರೆಸ್‌ ನಾಯಕರ ಮುಖಾಮುಖಿಗೆ ರೈ ಕರೆ 

04:25 PM Jul 09, 2017 | Team Udayavani |

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಅಹಿತಕರ ಘಟನೆ ಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಅವರು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ಸಭೆ ಕರೆಯುವುದಾಗಿ ಹೇಳಿದ್ದಾರೆ. 

Advertisement

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಒಂದೇ ವೇದಿಕೆಯಲ್ಲಿ ಚರ್ಚಿಸಬೇಕು. ಶೋಭಾ ಕರಂದ್ಲಾಜೆ ಬರಬೇಕು,ಡಿ.ವಿ.ಸದಾನಂದ ಗೌಡ ಬರಬೇಕು. ಎಲ್ಲಾ ಶಾಸಕರು, ನಾನು ಸಹಿತ ಸಭೆಯಲ್ಲಿರಬೇಕು. ಅವರ ತಪ್ಪು ನಾವು ಹೇಳ್ತೇವೆ ನಮ್ಮ ತಪ್ಪು ಅವರು ಹೇಳಲಿ ಎಂದರು. 

ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸುವುದಾಗಿ ರೈ ಹೇಳಿದರು. 
 

Advertisement

Udayavani is now on Telegram. Click here to join our channel and stay updated with the latest news.

Next