Advertisement

Ramanagara; ವೃದ್ಧ ದಂಪತಿಯನ್ನು ಬೆದರಿಸಿ ಚಿನ್ನ- ನಗದು ದೋಚಿದ ಖದೀಮರು

02:31 PM Jan 04, 2024 | Team Udayavani |

ರಾಮನಗರ: ಒಂಟಿಮನೆಯಲ್ಲಿದ್ದ ವೃದ್ಧ ದಂಪತಿಗಳಿಗೆ ಬೆದರಿಸಿ 58 ಗ್ರಾಂ ಚಿನ್ನ, 1.15 ಲಕ್ಷ ರೂ. ನಗದನ್ನು ಖದೀಮರು ದೋಚಿದ ಘಟನೆ ರಾಮನಗರ ತಾಲೂಕಿನ ಕೋಟಗಲ್ ಹೋಬಳಿ ನಿಜಿಯಪ್ಪನದೊಡ್ಡಿ ಗ್ರಾಮದಲ್ಲಿ ನಡೆದಿದೆ.

Advertisement

ಜಯಮ್ಮ ಚಿಕ್ಕಬೈರೇಗೌಡ ದಂಪತಿಗಳು ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಮನೆಗೆ ನುಗ್ಗಿದ ಇಬ್ಬರು ಆಗಂತುಕರು, ಚಿಕ್ಕಬೈರೇಗೌಡನ ಕಾಲು ಕಟ್ಟಿ, ಜಯಮ್ಮಗೆ ಚಾಕು ತೋರಿಸಿ, ದೊಣ್ಣೆಯಿಂದ ಹಲ್ಲೆ ಮಾಡಿ, ಬೀರುವಿನ ಕೀಪಡೆದು ಒಡವೆ, ನಗದು ದೋಚಿ ಮನೆಗೆ ಹೊರಗಿನಿಂದ ಚಿಲಕ ಜಡಿದು ಪರಾರಿಯಾಗಿದ್ದರೆ.

ಬಳಿಕ ಊರಿನಲ್ಲಿ ವಾಸವಾಗಿದ್ದ ಮಗ ಸೊಸೆಯನ್ನು ಕರೆಮಾಡಿ ಸ್ಥಳಕ್ಕೆ ಕರೆಸಿದ ವೃದ್ಧ ದಂಪತಿಗಳು ಬಾಗಿಲು ತೆಗೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next