Advertisement

ರಾಮನಗರ ಜಿಲ್ಲೆಗೆ 15ನೇ ವರ್ಷದ ಸಂಭ್ರಮ

09:15 PM Aug 23, 2021 | Team Udayavani |

ರಾಮನಗರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಭಾಗವಾಗಿದ್ದ ರಾಮನಗರ, ಚನ್ನಪಟ್ಟಣ, ಮಾಗಡಿಮತ್ತುಕನಕಪುರ ತಾಲೂಕುಗಳನ್ನುಬೇರ್ಪಡಿಸಿ,ರಾಮನಗರ ಜಿಲ್ಲೆಯನ್ನು ಆಗಸ್ಟ್‌ 23,2007ರಂದು ರಾಜ್ಯದ 28ನೇ ಜಿಲ್ಲೆಯಾಗಿರಚಿಸಲಾಗಿದೆ. ಇಂದು ಜಿಲ್ಲೆ 15ನೇವರ್ಷಕ್ಕೆಕಾಲಿಟ್ಟಿದೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬೇರ್ಪಡಿಸಿ ಎಂದು ಯಾರು ಅರ್ಜಿಹಾಕಿರಲಿಲ್ಲ, ಊಹೆಯೂ ಮಾಡಿರಲಿಲ್ಲ.ಪರಿಣಾಮಕಾರಿ ಆಡಳಿತ ನೀಡುವ ಉದ್ದೇಶಕ್ಕಾಗಿಚಿಕ Rಚೊಕ್ಕ ಜಿÇಯ ೆÉ ನ್ನು ರಚಿಸಲಾಗಿದೆ ಎಂದು ಅಂದುಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ.ಕುಮಾರಸ್ವಾಮಿಉದ್ದೇಶ ವ್ಯಕ್ತಪಡಿಸಿದ್ದರು.

ಸುಧಾರಣೆಯಾಗದ ಸಾಮಾನ್ಯನ ಬದುಕು:ಜಿಲ್ಲೆಯ ಆಡಳಿತಕ್ಕೆ ಅಗತ್ಯವಾಗಿಬೇಕಾದ ಕಚೇರಿಕಟ್ಟಡಗಳನ್ನುಜಿಲ್ಲೆಘೋಷಣೆ ಸಂದರ್ಭದಲ್ಲೇಕಂದಾಯ ಭವನ, ಪೊಲೀಸ್‌ ಭವನ, ಜಿಲ್ಲಾಪಂಚಾಯ್ತಿ ಭವನ, ಜಿಲ್ಲಾ ಕಚೇರಿಗಳಸಂಕಿರ್ಣ (ಡೀಸಿ ಕಚೇರಿ) ಕಟ್ಟಡಗಳುನಿರ್ಮಾಣವಾಗಿವೆ. ಪರಿಣಾಮಕಾರಿಆಡಳಿತ ನಿರೀಕ್ಷಿಸಿದ ಜಿಲ್ಲೆಯ ನಾಗರಿಕರಿಗೆಅಷ್ಟೇನು ಸಮಾಧಾನ ತಂದಿಲ್ಲ. ಕಾರಣಸರ್ಕಾರಿ ಕಚೇರಿಗಳಲ್ಲಿ ಸುಧಾರಿಸದ ಆಡಳಿತವ್ಯವಸ್ಥೆ, ವಿಳಂಬ ಧೋರಣೆ, ಭ್ರಷ್ಟಾಚಾರದವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿಅಧಿಕಾರಿಗಳಿಗೆ ಭವ್ಯವಾದ ಕಚೇರಿ ಸಿಕ್ಕಿತಾದರೂಜನಸಾಮಾನ್ಯರ ಬದುಕು ಮಾತ್ರ ಸುಧಾರಣೆಯಾಗಲಿಲ್ಲಎಂಬ ನೋವು ಜನಸಾಮಾನ್ಯರಲ್ಲಿ ವ್ಯಕ್ತವಾಗಿದೆ.

ಬರ ಕಾಡಿದ್ದೇ ಹೆಚ್ಚು!: ಕಳೆದ 15 ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕಾಡಿದ್ದೇ ಹೆಚ್ಚು.  2017ರಲ್ಲಿ ಜಿಲ್ಲೆದಶಕಕಂಡಾಗ ನೂರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಸೂತಕದ ಛಾಯೆಯಿಂದ ಜಿಲ್ಲೆ ಹೊರಬಂದಿರಲಿಲ್ಲ. ಬರ ಪರಿಸ್ಥಿತಿಯನ್ನು ಶಾಶ್ವತವಾಗಿ ಅಳಸಿಹಾಕಲು ನೀರಾವರಿ ಯೋಜನೆಗಳು ಸಾಕಾರವಾಗಿಲ್ಲ.ಶ್ರೀರಂಗ ಯೋಜನೆ ಇನ್ನು ಪೂರ್ಣಗೊಂಡಿಲ್ಲ.ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ.  ಕೆರೆತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ರಾಮನಗರನಗರಕ್ಕೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಪೂರ್ಣಗೊಳ್ಳಬೇಕಾಗಿದೆ.

ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ: ರಾಜೀವ್‌ಗಾಂಧಿ ವಿವಿ ಕಟ್ಟಡ, ಆರೋಗ್ಯ ನಗರ ಇನ್ನು ಸಾಕಾರವಾಗಿಲ್ಲ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗೂ ಬೆಂಗಳೂರಿಗೆ ಹೋಗಬೇಕಿದ್ದ ಜಿಲ್ಲೆಯ ಜನರಿಗೆಕಳೆದ5 ವರ್ಷಗಳಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆಗಮನಿಸಿದ್ದಾರೆ. ವಿವಿಧ ತಜ್ಞ ವೈದ್ಯರೊಂದಿಗೆ ಖಾಸಗಿಆಸ್ಪತ್ರೆಗಳು ತಲೆ ಎತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿಯೂಸಾಕಷ್ಟು ಸುಧಾರಣೆಯಾಗಿದೆ.

Advertisement

ಕೋವಿಡ್‌ ಸೋಂಕುಕಲಿಸಿದ ಪಾಠಕ್ಕೆ ಜಿಲ್ಲಾಡಳಿತ ಆರೋಗ್ಯ ಕ್ಷೇತ್ರವನ್ನುಗಂಭೀರವಾಗಿ ಪರಿಗಣಿಸಿದೆ.60ಕೋಟಿ ರೂ. ವೆಚ್ಚದಜಿಲ್ಲಾಸ್ಪತ್ರೆಯಲ್ಲಿ ಸದ್ಯಕ್ಕೆ ಕೋವಿಡ್‌ ಚಿಕಿತ್ಸೆಗೆ ಆದ್ಯತೆದೊರೆಯುತ್ತಿದೆ. ಕಂದಾಯ ಇಲಾಖೆಯ ಕಚೇರಿಗಳು ಇರಬೇಕಾದ್ದ ಕಂದಾಯ ಭವನ ಆಸ್ಪತ್ರೆಯಾಗಿಪರಿವರ್ತನೆಯಾಗುವ ಎಲ್ಲಾ ಲಕ್ಷಣಗಳು ಇವೆ.ಭರವಸೆ ಮೂಡಿಸುವ ಯೋಜನೆ: ರಾಮನಗರ ಜಿಲ್ಲೆರೇಷ್ಮೆಗೆಖ್ಯಾತಿ ಪಡೆದುಕೊಂಡಿದೆ. ರಾಮನಗರದಲ್ಲಿರುವ ರೇಷ್ಮೆ ಗೂಡು ಮಾರುಕಟ್ಟೆ ವಹಿವಾಟಿಗೆ ತಕ್ಕಂತೆ ವಿಶಾಲವಾಗಿ ಇಲ್ಲದಿರುವ ಕಾರಣ ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಯ ಬಳಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆಸರ್ಕಾರ ಮುಂದಾಗಿದೆ. ಚನ್ನಪಟ್ಟಣದ ಬೈರಾಪಟ್ಟಣದಬಳಿ ಮಾವು ಸಂಸ್ಕರಣಾ ಘಟಕವನ್ನು ಉದ್ದೇಶಿಸಲಾಗಿದೆ.ಕನಕಪು ‌ ರದಲ್ಲಿ ಮೇಘಾ ಡೇರಿ ಮತ್ತು ಚನ್ನಪಟ್ಟಣದಲ್ಲಿ ಹಾಲಿನ ಪುಡಿ ಘಟಕ ಸ್ಥಾಪನೆಯಾಗಿದ್ದು, ಜಿಲ್ಲೆಯಲ್ಲಿಹೈನೋದ್ಯಮಕ್ಕೆ ಪೂರಕವಾಗಿದೆ.

ಬೆಂಗಳೂರು ನಗರದ ಕಲ್ಮಶವನ್ನು ಹೊತ್ತುತರುತ್ತಿರುವ ವೃಷಭಾವತಿ ನದಿನೀರಿನ ಶುದ್ಧೀಕರಣಕ್ಕಾಗಿಬಿಬಿಎಂಪಿ ಮತ್ತು ಸರ್ಕಾರ ಸಂಸ್ಕರಣಾ ಘಟಕಗಳನ್ನುಸ್ಥಾಪಿಸುತ್ತಿವೆ. ಬಿಡದಿ ಹೋಬಳಿ ಬೈರಮಂಗಲ ಜಲಾಶಯ ಸುಧಾರಣೆಗೆ ಕಾಮಗಾರಿಪ್ರಗತಿಯಲ್ಲಿದೆ.ಬಿಡದಿಕೈಗಾರಿಕಾ ಪ್ರದೇಶ ವಿಶ್ವದ ಗಮನ ಸೆಳೆದಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ವಿಸ್ತೀರ್ಣಕ್ಕೆ ಸರ್ಕಾರಮುಂದಾಗಿದೆ. ಇವೆಲ್ಲ ಜಿಲ್ಲೆಯ ಆರ್ಥಿಕತೆ ಮತ್ತುಔದ್ಯೋಗಿಕತೆ ಪೂರಕ ಎಂಬ ಭರವಸೆ ಮೂಡಿಸಿವೆ.

ಇನ್ನೂ ನೀಗದ ಕೊರತೆಗಳು: ಜಿಲ್ಲಾ ಕೇಂದ್ರಕ್ಕೆತಕ್ಕದಾಗುವಂತೆ ಸುಸಜ್ಜಿತ ಮಾರುಕಟ್ಟೆ, ಬಸ್‌ನಿಲ್ದಾಣದ ಕೊರತೆ ಇನ್ನೂ ನೀಗಿಲ್ಲ.ಕನ್ನಡ ಭವನ, ರೈತಭವನ, ವಾರ್ತಾ ಭವನ, ಸುಸಜ್ಜಿತ ರಂಗ ಮಂದಿರದಅವಶ್ಯವಿದೆ. ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ಜಿಲ್ಲಾಕ್ರೀಡಾಂಗಣ ಎಂಬ ಲೇಬಲ್‌ ಮೆತ್ತಿಕೊಂಡಿದೆ.ಜಿಲ್ಲೆಯ ಯಾವ ತಾಲೂಕಿನಲ್ಲೂ ವೈಜಾnನಿಕತ್ಯಾಜ್ಯಲೇವಾರಿಘಟಕಗಳು ಇಲ್ಲ. ನೀರಾವರಿ ಯೋಜನೆಗಳು ವೇಗ ಪಡೆದುಕೊಳ್ಳಬೇಕಾಗಿದೆ.

ಬಿ.ವಿ.ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next