Advertisement

ರಾಮನಗರ: ಶಕ್ತಿ ಬ್ಯಾಟರೀಸ್ ಕಂಪನಿಯಲ್ಲಿ ಭಾರಿ ಅಗ್ನಿ ಅವಘಡ

07:30 PM Jan 05, 2021 | Team Udayavani |

ರಾಮನಗರ: ಜಿಲ್ಲೆಯ ಕನಕಪುರ ತಾಲೂಕು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಕ್ತಿ ಬ್ಯಾಟರೀಸ್ ಕಂಪನಿಯಲ್ಲಿ ಇಂದು ಸಂಜೆ ಭಾರಿ ಅಗ್ನಿ ದುರಂತ ಸಂಭವಿಸಿದೆ.

Advertisement

ಕಾರ್ಖಾನೆಯ ಥರ್ಮಕೋಲ್ ಇಟ್ಟಿದ್ದ ಸ್ಥಳದಲ್ಲಿ ಅಗ್ನಿ  ಕಾಣಿಸಿಕೊಂಡು, ಇಡೀ ಕಾರ್ಖಾನೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ. ಬೆಂಕಿ ನಂದಿಸಲು ಸಾಧ್ಯವಾಗದೆ ಕಾರ್ಮಿಕರು ಹೊರಗೋಡಿದ್ದಾರೆ. ಸುತ್ತ ಮುತ್ತ ಕಾರ್ಖಾನೆಗಳಿದ್ದು ಬೆಂಕಿಯ ಕೆನ್ನಾಲಿಗೆ ವ್ಯಾಪಿಸುವ ಭಯ ಆವರಿಸಿದೆ. ಸದ್ಯ  ಅಗ್ನಿಶಾಮಕ ದಳ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ದಟ್ಟ ಹೊಗೆಯಿಂದಾಗಿ ಅಕ್ಕ ಪಕ್ಕದ ವಸತಿ ಬಡಾವಣೆಗಳ ನಾಗರಿಕರಲ್ಲಿ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: ಕೋವಿಡ್ : ಗಣರಾಜ್ಯೋತ್ಸವಕ್ಕೆ ಭಾರತ ಭೇಟಿ ರದ್ದು ಮಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

 

Advertisement

Advertisement

Udayavani is now on Telegram. Click here to join our channel and stay updated with the latest news.

Next