Advertisement

Ramanagara; ತುಂಬಿ ಹರಿಯುತ್ತಿದೆ ಕಾವೇರಿ; ಬೊಮ್ಮಸಂದ್ರ ಗ್ರಾಮಕ್ಕೆ ಸಂಪರ್ಕ ಕಡಿತ

04:52 PM Aug 01, 2024 | Team Udayavani |

ರಾಮನಗರ: ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗ ಕನಕಪುರ ತಾಲೂಕಿನ ಸಂಗಮದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ.

Advertisement

ಸಂಗಮದ ಬಳಿ ಇರುವ ಮಯೂರ ಯಾತ್ರಿನಿವಾಸದ ಸುತ್ತ ನೀರು ತುಂಬಿದೆ. ಪ್ರಸಿದ್ದ ಪ್ರವಾಸಿತಾಣ ಮೇಕೆದಾಟು ಬಳಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಮೇಕೆದಾಟು ಮೂಲಕ ತಮಿಳುನಾಡಿನತ್ತ ಭೋರ್ಗರೆದು ಹರಿಯುತ್ತಿದೆ.

ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿರುವ ಪರಿಣಾಮ ಕನಕಪುರ ತಾಲೂಕಿನ ಬೊಮ್ಮಸಂದ್ರ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಗ್ರಾಮಕ್ಕೆ ಹೋಗಿಬರಲು ಅರಣ್ಯ ಇಲಾಖೆಯಿಂದ ತೆಪ್ಪದ ವ್ಯವಸ್ಥೆ ಮಾಡಲಾಗಿದೆ.

ಕನಕಪುರ ತಾಲೂಕಿನ ಗಾಳಿಬೋರೆ ಜಂಗಲ್‌ ಲಾಡ್ಸ್‌ನ ಟೆಂಟ್‌ಹೌಸ್‌ಗಳು ಜಲಾವೃತವಾಗಿದೆ. ಕಳೆದ ಮೂರು ದಿನಗಳಿಂದ ಜಂಗಲ್‌ಲಾಡ್ಸ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದೆ. ಸಂಗಮ ಮತ್ತು ಮೇಕೆದಾಟು ಪ್ರವಾಸಿತಾಣಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next