Advertisement

ರಾಮದುರ್ಗ: ಲಾರಿ-ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ; ಸವಾರರು ಸಾವು

10:51 AM Oct 16, 2022 | Team Udayavani |

ರಾಮದುರ್ಗ: ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿ ಚಕ್ರ ಸವಾರರಿಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹಲಗತ್ತಿ ಗ್ರಾಮದ ಬಳಿ ಅ.15ರ ರಾತ್ರಿ ನಡೆದಿದೆ.

Advertisement

ತಾಲೂಕಿನ ಹಣಮಾಪೂರ ಗ್ರಾಮದ ಅರ್ಜುನ ತಿಮ್ಮಣ್ಣ ಬಂಡಿವಡ್ಡರ(40) ಮತ್ತು ಓಬಳಾಪೂರ ಗ್ರಾಮದ ಸುವರ್ಣ ಬಸಪ್ಪಾ ಹೊಳೆನ್ನವರ(28) ಮೃತಪಟ್ಟವರು ಎಂದು ಗುರ್ತಿಸಲಾಗಿದೆ.

ರಾಮದುರ್ಗದಿಂದ ಮುದಕವಿ ಕಡೆಗೆ ಹೊರಟಿದ್ದ ಲಾರಿ ಮತ್ತು ಮುದಕವಿ ಕಡೆಯಿಂದ ರಾಮದುರ್ಗ ಕಡೆಗೆ ದ್ವಿಚಕ್ರ ವಾಹನ ಬರುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ರಾಮದುರ್ಗ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ್ ಕಾರಜೋಳ ಸ್ಥಳಕ್ಕೆ ಧಾವಿಸಿ, ಮೃತ ದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ವಾಹನಗಳನ್ನು ವಶಕ್ಕೆ ಪಡೆಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next