Advertisement

ಉಡುಪಿ: ಶ್ರೀರಾಮ ಸೇನೆ ಪ್ರತಿಭಟನೆ

03:05 AM Jul 03, 2017 | Team Udayavani |

ಉಡುಪಿ: ಶ್ರೀಕೃಷ್ಣ ಮಠದ ಪರಿಸರದಲ್ಲಿ ಮುಸ್ಲಿಮರಿಗೆ ನಮಾಜು ಮಾಡಲು ಅವಕಾಶ ಕಲ್ಪಿಸಿದ್ದನ್ನು ವಿರೋಧಿಸಿ ರವಿವಾರ ಶ್ರೀರಾಮ ಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಒಂದು ಗಂಟೆ ಕಾಲ ಭಜನೆ ಮಾಡುವ ಮೂಲಕ ಪ್ರತಿಭಟಿಸಿದರು. ಇಫ್ತಾರ್‌ ಕೂಟ ಆಯೋಜಿಸಿದ್ದಲ್ಲದೆ ಮಠದ ಪರಿಸರದಲ್ಲಿ ನಮಾಜಿಗೆ ಅವಕಾಶ ಮಾಡಿದ್ದರಿಂದ ನಮಗೆ ಅತೀವ ನೋವಾಗಿದೆ. ನೋವನ್ನು ಶ್ರೀಕೃಷ್ಣ ಮಠದಲ್ಲಿ ಹಂಚಿಕೊಳ್ಳಲಾಗದ ಕಾರಣ ಬಸ್‌ ನಿಲ್ದಾಣ ಎದುರು ಭಜನೆ ಮೂಲಕ ವ್ಯಕ್ತಪಡಿಸುತ್ತಿದ್ದೇವೆ ಎಂದು ಸಂಘಟನೆಯ ಜಯರಾಮ ಅಂಬೆಕಲ್ಲು ಹೇಳಿದರು.

Advertisement

ಮುಸ್ಲಿಂ ಬಂಧುಗಳು ಮಸೀದಿಯಲ್ಲಿ ನಮಗೆ ಭಜನೆ ಮಾಡಲು ಅವಕಾಶ ಕೊಡುತ್ತಾರೆಯೇ?, ದೀಪಾವಳಿಯನ್ನು ಸಂಭ್ರಮಿಸಲು ಬಿಡುತ್ತಾರೆಯೇ ಎಂದು ಪ್ರಶ್ನಿಸಿದ ಉಭಯ ಸಂಘಟನೆಗಳು ಮೊನ್ನೆ ಶ್ರೀಕೃಷ್ಣ ಮಠದ ಆವರಣದಲ್ಲಿ ನಮಾಜು ಮಾಡಿದ್ದು ಸರ್ವಥಾ ಸರಿಯಲ್ಲ. ನಾವು ಅದನ್ನು ಖಂಡಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಮೋಹನ್‌ ಭಟ್‌, ದಿನೇಶ ಪಾಂಗಾಳ, ಜಯರಾಮ ಅಂಬೆಕಲ್ಲು, ದೀಪಕ್‌, ಜಗದೀಶ್‌ ಅಮೀನ್‌, ಪ್ರವೀಣ್‌ ಕುರ್ಕಾಲು, ಪ್ರವೀಣ್‌ ಮೂಡಬೆಟ್ಟು, ಸಂದೀಪ ಮೂಡಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next