Advertisement

ಮಂದಿರ ನಿರ್ಮಾಣ ಶೀಘ್ರ?

01:55 PM Jul 06, 2018 | |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ವರ್ಷಾಂತ್ಯಕ್ಕೆಲ್ಲ ಕಾನೂನು ಬದ್ಧವಾಗಿಯೇ, ಯಾವುದೇ ವಿವಾದಗಳಿಲ್ಲದೇ ಆರಂಭಗೊಳ್ಳುವ ವಿಶ್ವಾಸವಿದೆ ಎಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ.

Advertisement

ಈಗಾಗಲೇ ಅಗತ್ಯ ಇಟ್ಟಿಗೆಗಳನ್ನು ಇಲ್ಲಿಗೆ ತರಿಸಿಕೊಳ್ಳ ಲಾಗಿದ್ದು, ಇವುಗಳನ್ನೇ ಬಳಸಿಕೊಂಡು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸುಪ್ರೀಂಕೋರ್ಟ್‌ ಆದಷ್ಟು ಬೇಗ ವಿಚಾರಣೆ ನಡೆಸಿ ತೀರ್ಪು ನೀಡುವ ಭರವಸೆ ಇದೆ. ದಿನಂಪ್ರತಿ ವಿಚಾರಣೆ ನಡೆದರೆ ಸೆಪ್ಟೆಂಬರ್‌ ವೇಳೆಗೆಲ್ಲ ತೀರ್ಪು ಬರಬಹುದು ಎಂದೂ ಅಲೋಕ್‌ ಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next