Advertisement

ರಾಮ ಮಂದಿರ : ಪ್ರಧಾನಿ ಮೋದಿ ಹೇಳಿಕೆಗೆ ಶಿವ ಸೇನೆ ಖಂಡನೆ

11:00 AM Jan 02, 2019 | Team Udayavani |

ಹೊಸದಿಲ್ಲಿ : ‘2014ರಲ್ಲಿ ರಾಮ ಮಂದಿರ ನಿರ್ಮಾಣ ವಿಷಯವನ್ನು ಮುಂದಿಟ್ಟುಕೊಂಡೇ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು; ಈಗ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ವಿಷಯ ಕೋರ್ಟಿನಲ್ಲಿದೆ; ಅದು ಇತ್ಯರ್ಥವಾಗುವ ತನಕ ಏನೂ ಮಾಡಲಾಗದು ಅಂತಿದ್ದಾರೆ. ಇದು ಸರಿಯಾ ?’ ಎಂದು ಶಿವ ಸೇನೆ ಟೀಕಿಸಿದೆ. 

Advertisement

‘ರಾಮಮಂದಿರದ ವಿಷಯದಲ್ಲಿ ಈಗ ಏನೂ ಮಾಡಲಾಗದು ಎನ್ನುವುದಾದರೆ ರಾಮ ಮಂದಿರ ವಿಷಯದಲ್ಲಿ ಅಷ್ಟೆಲ್ಲ ರಕ್ತಪಾತ ಮಾಡುವ ಅಗತ್ಯ ಇತ್ತಾ ? ರಾಮ ಮಂದಿರ ವಿಷಯ ಕೋರ್ಟಿನಲ್ಲಿದೆ ಎಂದು ಹೇಳಿ ಕೈತೊಳೆದುಕೊಳ್ಳುವ ಪ್ರಧಾನ ಮಂತ್ರಿ ನಮಗೆ ಬೇಡ’ ಎಂದು ಹಿರಿಯ ಶಿವ ಸೇನೆ ನಾಯಕ, ಸಂಸದ ಸಂಜಯ್‌ ರಾವತ್‌ ಹೇಳಿದರು. 

‘ಪ್ರಧಾನಿ ಮೋದಿ ಅವರು ಇಷ್ಟನ್ನೇ ಹೇಳುವುದಿದ್ದರೆ ರಾಮ ಮಂದಿರ ನಿರ್ಮಾಣ ಆಂದೋಲನ ನಡೆಸುವ ಅಗತ್ಯವೇ ಇರಲಿಲ್ಲ’ ಎಂದು ರಾವತ್‌, ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಖಂಡಿಸುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next