Advertisement

Ram Navami:ಕೆಕೆಆರ್‌ ಪಂದ್ಯದಲ್ಲಿ ಬದಲಾವಣೆ

11:55 PM Apr 01, 2024 | Team Udayavani |

ಕೋಲ್ಕತಾ: ಇದೇ ತಿಂಗಳ 17ರಂದು ಕೋಲ್ಕತಾದಲ್ಲಿ ನಡೆಯಲಿರುವ ಕೆಕೆಆರ್‌-ರಾಜಸ್ಥಾನ್‌ ನಡುವಿನ ಪಂದ್ಯದಲ್ಲಿ ಬದಲಾವಣೆಯ ಸಾಧ್ಯತೆ ಕಂಡುಬಂದಿದೆ. ಅಂದು ರಾಮನವಮಿ ಆದ್ದರಿಂದ ಹಾಗೂ ಎ. 19ರಂದು ಪಶ್ಚಿಮ ಬಂಗಾಲದಲ್ಲಿ ಮೊದಲ ಹಂತದ ಚುನಾವಣೆ ನಡೆಯುವುದರಿಂದ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದು ಎಂಬುದಾಗಿ ಪೊಲೀಸ್‌ ಇಲಾಖೆ ಬಂಗಾಲ ಕ್ರಿಕೆಟ್‌ ಮಂಡಳಿ (ಸಿಎಬಿ) ಸೂಚಿಸಿದೆ. ಸಿಎಬಿ ಅಧ್ಯಕ್ಷ ಸ್ನೇಹಶಿಷ್‌ ಗಂಗೂಲಿ ಇದನ್ನು ಬಿಸಿಸಿಐ ಗಮನಕ್ಕೆ ತಂದಿದ್ದಾರೆ.

Advertisement

ಇದರಂತೆ ಈ ಪಂದ್ಯವನ್ನು ಒಂದು ದಿನ ಮುಂಚಿತವಾಗಿ (ಎ. 16) ಅಥವಾ ಒಂದು ದಿನ ವಿಳಂಬವಾಗಿ (ಎ. 18) ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next