Advertisement

ಕೆನಡಾ: ರಾಮ ಮಂದಿರದ ಮೇಲೆ ಹಿಂದೂ ವಿರೋಧಿ ಬರಹ; ಸೂಕ್ತ ಕ್ರಮಕ್ಕೆ ಆಗ್ರಹ

09:40 AM Feb 15, 2023 | Team Udayavani |

ಟೊರೊಂಟೊ (ಕೆನಡಾ) : ಕೆನಡಾದ  ಹಿಂದೂ ದೇವಾಲಯದ ಮೇಲೆ ಹಿಂದೂ ವಿರೋಧಿ, ದೇಶ ವಿರೋಧಿ ಗೋಡೆ ಬರಹ ಬರೆದ ಘಟನೆ ಬೆಳಕಿಗೆ ಬಂದಿದೆ.

Advertisement

ಕೆನಡಾದ ಮಿಸ್ಸಿಸೌಗಾದಲ್ಲಿರುವ ರಾಮ ಮಂದಿರದ ಗೋಡೆಗಳ ಹಿಂದೂ ವಿರೋಧಿ ಗೋಡೆ ಬರಹವನ್ನು ಕಿಡಿಗೇಡಿಗಳು ಬರೆದಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆಯೂ ಆಕ್ಷೇಪಾರ್ಹ ಬರಹವನ್ನು ಬರೆದು, ಬಿಬಿಸಿಯ ಹೆಸರನ್ನು ಬರೆದಿದ್ದಾರೆ.

ಈ ಘಟನೆಗೆ ಟೊರೊಂಟೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತೀವ್ರವಾಗಿ ಖಂಡಿಸಿದ್ದು,ನಾವು ಮಿಸ್ಸಿಸೌಗಾದ ರಾಮ ಮಂದಿರದಲ್ಲಿ ಬರೆದ ದೇಶ ಹಾಗೂ ಹಿಂದೂ ವಿರೋಧಿ ಗೋಡೆ ಬರಹವನ್ನು ಖಂಡಿಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲು ಹೇಳಿದ್ದೇವೆ ಎಂದಿದೆ.

ಇತ್ತೀಚೆಗೆ ಕೆನಡಾದ ಬ್ರಾಂಪ್ಟನ್‌ ನಲ್ಲಿರುವ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಬರಹದಿಂದ ವಿರೂಪಗೊಳಿಸಲಾಗಿತ್ತು. ಇದು ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. 2022ರ ಸೆಪ್ಟೆಂಬರ್ ನಲ್ಲಿ, ಕೆನಡಾದ ಸ್ವಾಮಿನಾರಾಯಣ ಮಂದಿರವನ್ನು ಭಾರತ ವಿರೋಧಿ ಗೀಚುಬರಹದ ಮೂಲಕ ಕೆನಡಿಯನ್ ಖಲಿಸ್ತಾನಿ ಉಗ್ರಗಾಮಿಗಳು ವಿರೂಪಗೊಳಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next