Advertisement

ರಂಗಮಂದಿರ ಪುನರಾರಂಭಕ್ಕೆ ರ್ಯಾಲಿ

01:00 AM May 14, 2019 | Team Udayavani |

ಬೆಂಗಳೂರು: ಕಲಾಗ್ರಾಮದ ರಂಗಮಂದಿರ ಪುನರಾರಂಭಿಸಲು ಒತ್ತಾಯಿಸಿ ರಂಗವಸಂತ ಸಾಂಸ್ಕೃತಿಕ ಸೇವಾ ಟ್ರಸ್ಟ್‌ ವತಿಯಿಂದ ಪುರಭವನದ ಎದುರು ಸೋಮವಾರ ಬೈಕ್‌ರ್ಯಾಲಿ ನಡೆಸಿದರು.

Advertisement

ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್‌ ಸದಸ್ಯರು, ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ರಂಗಮಂದಿರವು ಸುಮಾರು 5 ತಿಂಗಳ ಹಿಂದೆ ಬೆಂಕಿ ಅವಘಡದಿಂದ ಹಾನಿಗೊಳಗಾಗಿತ್ತು.

ಹೀಗಾಗಿ, ಕನ್ನಡ ಸಂಸ್ಕೃತಿ ಇಲಾಖೆಯು ಆ ರಂಗಮಂದಿರವನ್ನು ತಾತ್ಕಾಲಿಕವಾಗಿ ಮುಚ್ಚಿತ್ತು. ಆನಂತರ ಇಲಾಖೆಯು ಯಾವುದೇ ದುರಸ್ತಿಗೆ ಮುಂದಾಗದೇ ನಿರ್ಲಕ್ಷ್ಯ ತೋರಿದೆ. ರಂಗಭೂಮಿ ಮುಚ್ಚಿರುವುದರಿಂದ ರಂಗ ತಂಡಗಳಿಗೆ ಹಾಗೂ ಸ್ಥಳೀಯ ಪ್ರೇಕ್ಷಕರಿಗೆ ಸಾಕಷ್ಟು ತೊಂದರೆಯಾಗಿದೆ.

ಹೀಗಾಗಿ, ಕನ್ನಡ ಸಂಸ್ಕೃತಿ ಇಲಾಖೆಗೆ ರಂಗಮಂದಿರದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು “ರಂಗಭೂಮಿ ಉಳಿಸಿ, ಬೆಳೆಸಿ’ ಎಂಬ ಘೋಷಣೆಯೊಂದಿಗೆ ನಗರದ ವಿವಿಧೆಡೆ ಬೈಕ್‌ ರ್ಯಾಲಿ ನಡೆಸಿ ಆನಂತರ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಮನವಿ ಪತ್ರಸಲ್ಲಿಸಲಾಯಿತು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next