Advertisement

ರಕ್ಷಿತ್ ಶೆಟ್ಟಿ ಕಣ್ಣಲ್ಲಿ ‘ಸಪ್ತ’ ಕನಸು

03:10 PM May 01, 2021 | Team Udayavani |

ನಟ ರಕ್ಷಿತ್‌ ಶೆಟ್ಟಿ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಚಿತ್ರೀಕರಣ ಕೆಲ ದಿನಗಳ ಹಿಂದಷ್ಟೇ ಸದ್ದಿಲ್ಲದೆ ಆರಂಭವಾಗಿತ್ತು. ಸುಮಾರು 21 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಬಳಿಕ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿತ್ತು.

Advertisement

ಇದೇ ವೇಳೆ ಕೊರೋನಾ ಎರಡನೇ ಅಲೆಯ ಆತಂಕ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಜೊತೆಗೆ ಲಾಕ್‌ಡೌನ್‌ ಕೂಡ ಘೋಷಣೆಯಾಗಿದ್ದರಿಂದ, ಇದೀಗ ಚಿತ್ರತಂಡ ತನ್ನ ಎರಡನೇ ಹಂತದ ಚಿತ್ರೀಕರಣವನ್ನು ಕೆಲಕಾಲ ಮುಂದೂಡಿದೆ.

ಈ ಹಿಂದೆ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’, “ಕವಲುದಾರಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಹೇಮಂತ್‌ ರಾವ್‌ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯ ನಡೆದಿರುವ ಚಿತ್ರೀಕರಣದ ಬಗ್ಗೆ ಮಾತನಾಡಿರುವ ನಿರ್ದೇಶಕ ಹೇಮಂತ್‌ ರಾವ್‌, “ಈಗಾಗಲೇ ಬೆಂಗಳೂರು ಸುತ್ತಮುತ್ತ 35% ರಷ್ಟು ಭಾಗ ಚಿತ್ರೀಕರಣ ಮಾಡಿದ್ದೇವೆ. ಸಾಕಷ್ಟು ಮುಂಜಾಗರೂಕತೆ ವಹಿಸಿ, ನಿಯಮಗಳನ್ನು ಪಾಲಿಸಿ ಮೊದಲ ಹಂತದ ಶೂಟಿಂಗ್‌ ಮಾಡಿದ್ದೇವೆ. ಸದ್ಯ ಕೋವಿಡ್‌ ಭಯ ಮತ್ತು ಲಾಕ್‌ಡೌನ್‌ನಿಂದ ಶೂಟಿಂಗ್‌ ನಿಲ್ಲಿಸಿದ್ದೇವೆ ಎಂದಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next