Advertisement

Rajya Sabha:ವಿಪಕ್ಷದ ಜತೆಗೂಡಿದ ಒಡಿಶಾದ ಬಿಜೆಡಿ ಸಂಸದರು!

01:20 AM Jun 30, 2024 | Team Udayavani |

ಹೊಸದಿಲ್ಲಿ: ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿಜು ಜನತಾ ದಳ(ಬಿಜೆಡಿ) ರಾಜ್ಯಸಭೆಯಲ್ಲಿ ವಿಪಕ್ಷಗಳ ಸಾಲಿಗೆ ಸೇರ್ಪಡೆಯಾಗಿದೆ. ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಆಗ್ರಹಿಸುವ ಮೂಲಕ ವಿಪಕ್ಷಗಳ ಬೇಡಿಕೆಗೆ ಬೆಂಬಲ ನೀಡಿತು. ಜೂ.24ರಂದು ನಡೆದ ಪಕ್ಷದ ಸಂಸದರ ಸಭೆಯಲ್ಲಿ ಮಾಜಿ ಸಿಎಂ ನವೀನ್‌ ಪಟ್ನಾಯಕ್‌ ರಾಜ್ಯಸಭೆಯಲ್ಲಿ ಬಿಜೆಡಿ ವಿಪಕ್ಷದ ಸ್ಥಾನ ನಿಭಾಯಿಸಲಿದೆ ಎಂದು ಹೇಳಿದ್ದರು. ಅಲ್ಲದೇ ಒಡಿಶಾಗೆ ವಿಶೇಷ ಸ್ಥಾನಮಾನಕ್ಕಾಗಿ ಪಕ್ಷವು ಹೋರಾಟ ನಡೆಸಲಿದ್ದು, ಇದಕ್ಕಾಗಿ ಎನ್‌ಡಿಎ ಅನ್ನು ಹೊಣೆಗಾರರನ್ನಾಗಿ ಮಾಡಿ, ವಿಪಕ್ಷ ಸ್ಥಾನವನ್ನು ನಿಭಾಯಿಸುವುದಾಗಿ ಹೇಳಿದ್ದರು. ಈ ಸಭೆ ನಡೆದ ನಾಲ್ಕು ದಿನಗಳ ಬಳಿಕ ರಾಜ್ಯಸಭೆಯಲ್ಲಿ ಬಿಜೆಡಿ ಸಂಸದರು ವಿಪಕ್ಷಗಳ ಜತೆಗೂಡಿ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next