Advertisement

Leh ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್: ಸಿಯಾಚಿನ್‌ ಭೇಟಿ ರದ್ದು

05:27 PM Mar 24, 2024 | Team Udayavani |

ಲೇಹ್: ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಲೇಹ್‌ನಲ್ಲಿ ಸೇನಾ ಯೋಧರೊಂದಿಗೆ ಹೋಳಿ ಆಚರಿಸಿದರು. ಹವಾಮಾನ ವೈಪರೀತ್ಯವನ್ನು ಎದುರಿಸಿ ಶತ್ರುಗಳಿಂದ ದೇಶವನ್ನು ರಕ್ಷಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದರು.

Advertisement

ರಕ್ಷಣ ಸಚಿವ ಸಿಂಗ್ ಅವರು ಸೈನಿಕರ ಹಣೆಯ ಮೇಲೆ ‘ಗುಲಾಲ್’ ತಿಲಕ ಹಚ್ಚಿದರು.ಹಬ್ಬ ಆಚರಿಸಿದ ನಂತರ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಲಡಾಖ್ ಧೈರ್ಯ ಮತ್ತು ಶೌರ್ಯದ ರಾಷ್ಟ್ರ ರಾಜಧಾನಿಯಾಗಿದೆ’ ಎಂದರು.

“ನಾವು ದೆಹಲಿಯಲ್ಲಿ ರಾಷ್ಟ್ರ ರಾಜಧಾನಿ, ಮುಂಬೈನಲ್ಲಿ ಆರ್ಥಿಕ ರಾಜಧಾನಿ ಮತ್ತು ಬೆಂಗಳೂರಿನಲ್ಲಿ ತಾಂತ್ರಿಕ ರಾಜಧಾನಿಯನ್ನು ಹೊಂದಿರುವಂತೆಯೇ ಲಡಾಖ್ ಭಾರತದ ಧೈರ್ಯ ಮತ್ತು ಶೌರ್ಯದ ರಾಜಧಾನಿಯಾಗಿದೆ’ ಎಂದರು.

ಸಿಂಗ್ ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ಗೆ ಹೋಗಬೇಕಿತ್ತು, ಆದರೆ ಪ್ರತಿಕೂಲ ಹವಾಮಾನದಿಂದಾಗಿ ಅವರ ಭೇಟಿಯನ್ನು ರದ್ದುಗೊಳಿಸಲಾಯಿತು.ಲೇಹ್ ಭೇಟಿ ವೇಳೆ ಸಚಿವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next