Advertisement

ರಷ್ಯಾದಲ್ಲಿ ಭಾರತ ಮತ್ತು ಚೀನ ರಕ್ಷಣ ಸಚಿವರ ಭೇಟಿ ಸಾಧ್ಯತೆ

05:09 PM Sep 04, 2020 | Karthik A |

ಮಣಿಪಾಲ: ಲಡಾಖ್‌ನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತ ಮತ್ತು ಚೀನದ ರಕ್ಷಣಾ ಮಂತ್ರಿಗಳು ಇಂದು ಮಾಸ್ಕೋದಲ್ಲಿ ಸಭೆ ಸೇರುವ ನಿರೀಕ್ಷೆಯಿದೆ.

Advertisement

ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಗೆ ಸಂಬಂಧಿಸಿದಂತೆ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಷ್ಯಾ ಪ್ರವಾಸದಲ್ಲಿದ್ದಾರೆ. ಚೀನದ ರಕ್ಷಣ ಸಚಿವ ವೀ ಫೆಂಗ್‌ ಕೂಡ ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ವೀ ಅವರು ರಾಜನಾಥ್‌ ಅವರನ್ನು ಭೇಟಿ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದನ್ನು ಅಧಿಕೃತವಾಗಿ ಇನ್ನೂ ದೃಢಪಡಿಸಲಾಗಿಲ್ಲ.

ಪೂರ್ವ ಲಡಾಖ್‌ನಲ್ಲಿರುವ ಭಾರತ ಮತ್ತು ಚೀನ ಯುದ್ಧದ ಕಾರ್ಮೋಡಗಳನ್ನು ಹೊಂದಿದ್ದು, ಈ ನಡುವೆ ಉಭಯ ದೇಶಗಳ ನಾಯಕರ ನಡುವಿನ ನಡೆಯುವ ಸಭೆ ಇದಾಗಿದೆ. ಆದರೆ ಮೂರು ದಿನಗಳ ಈ ಭೇಟಿಯಲ್ಲಿ ರಷ್ಯಾದಲ್ಲಿ ಶಾಂಘೈ ಸಹಕಾರ ಸಂಸ್ಥೆ ಸಭೆಗಳನ್ನು ಹೊರತುಪಡಿಸಿ ಇತರ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಈಗಿನ ಮಾಹಿತಿ ಪ್ರಕಾರ ರಷ್ಯಾ ಮತ್ತು ಭಾರತ ನಡುವೆ ರಕ್ಷಣಾ ಒಪ್ಪಂದಗಳ ಕುರಿತು ಒಂದು ಸುತ್ತಿನ ಮಾತುಕತೆ ನಡೆದಿದೆ. ರಷ್ಯಾದ ರಕ್ಷಣಾ ಸಚಿವರನ್ನೂ ರಾಜನಾಥ್‌ ಭೇಟಿ ಮಾಡಿದ್ದಾರೆ.

ರಾಜನಾಥ್‌ ಸಿಂಗ್‌ ಮಾಸ್ಕೋಗೆ ತೆರಳುವ ಮೊದಲೇ ಚೀನದ ರಕ್ಷಣಾ ಸಚಿವರನ್ನು ಭೇಟಿ ಮಾಡುವ ಕಾರ್ಯಕ್ರಮ ವೇಳಾಪಟ್ಟಿಯಲ್ಲಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತ್ತು. ಇಬ್ಬರು ರಕ್ಷಣಾ ಮಂತ್ರಿಗಳನ್ನು ಭೇಟಿ ಮಾಡಲು ಚೀನ ಪ್ರಯತ್ನಿಸುತ್ತಿದೆ ಎಂದು ಗುರುವಾರ ಸುದ್ದಿ ಸಂಸ್ಥೆ ತಿಳಿಸಿತ್ತು. ಇದಕ್ಕಾಗಿ ರಾಜತಾಂತ್ರಿಕ ಮಟ್ಟದಲ್ಲಿಯೂ ಪ್ರಯತ್ನಗಳು ನಡೆಯುತ್ತಿವೆ. ಗಡಿ ವಿವಾದಗಳನ್ನು ಬಗೆಹರಿಸಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಗಂಭೀರ ಪ್ರಯತ್ನಗಳನ್ನು ಮಾಡುವಂತೆ ಭಾರತವು ಚೀನಕ್ಕೆ ಆಗ್ರಹಿಸಿದೆ.

Advertisement

ಅಗಸ್ಟ್‌ 29-30ರ ರಾತ್ರಿ ಪಂಗೊಂಗ್‌ ಸೋ ಸರೋವರದ ದಕ್ಷಿಣ ಭಾಗವನ್ನು ಆಕ್ರಮಿಸಿಕೊಳ್ಳುವ ಚೀನದ ಪ್ರಯತ್ನವನ್ನು ಭಾರತೀಯ ಸೇನೆ ವಿಫ‌ಲಗೊಳಿಸಿತು. ಇದಾದ ಬಳಿಕ ಘರ್ಷಣೆಗಳು ನಡೆಯುತ್ತಿವೆ. ಗುರುವಾರದ ರಾತ್ರಿ ಮತ್ತು ಶುಕ್ರವಾರದ ಬೆಳವಣಿಗೆಯಲ್ಲಿ ಭಾರತೀಯ ಸೇನಾಪಡೆ ಕೂಡಾ ಆಯಕಟ್ಟಿನ ಸ್ಥಳದಲ್ಲಿ ಮಿಸೈಲ್ಲ್, ರಾಕೆಟ್ಸ್‌ ಮತ್ತು ಇತರ ಶಸ್ತ್ರಾಸ್ತ್ರವನ್ನು ಸಜ್ಜುಗೊಳಿಸಿದೆ. ಮಿಸೈಲ್‌ ಶಸ್ತ್ರಸಜ್ಜಿತ ಟಿ-90 ಯುದ್ಧ ಟ್ಯಾಂಕ್‌ ಹಾಗೂ ಪೂರ್ವ ಲಡಾಖ್‌ನ ಅತೀ ಎತ್ತರದ ಪ್ರದೇಶದಲ್ಲಿ ಟಿ-72ಎಂ1 ಟ್ಯಾಂಕ್‌ ಅನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ಬ್ಲ್ಯಾಕ್‌ ಟಾಪ್‌ ಮತ್ತು ಹೆಲ್ಮೆಟ್‌ ಸೇರಿದಂತೆ ಎರಡು ಪ್ರದೇಶಗಳಲ್ಲಿ ಚೀನ ಸೇನೆ ತನ್ನ ನಿಯಂತ್ರಣ ಸಾಧಿಸಿದೆ. ಹಲವು ಮೂಲಗಳ ಪ್ರಕಾರ ಉಭಯ ಪ್ರದೇಶಗಳಿಗೂ ದಾಳಿ ನಡೆಸಲು ಅನುಕೂಲವಾಗುವ ನಿಟ್ಟನಲ್ಲಿ ಭಾರತೀಯ ಸೈನಿಕರು ಎತ್ತರದ ಪ್ರದೇಶಗಳಲ್ಲಿ ಸಜ್ಜಾಗಿ ನಿಂತಿರುವುದಾಗಿ ವರದಿ ತಿಳಿಸಿದೆ. ಭಾರೀ ಪ್ರಮಾಣದಲ್ಲಿ ವೈಮಾನಿಕ ಚಟುವಟಿಕೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ. ಟಿಬೆಟ್‌ನಲ್ಲಿರುವ ವಾಯು ನೆಲೆಯಲ್ಲಿ ಚೀನ ವೈಮಾನಿಕ ಚಟುವಟಿಕೆ ಚುರುಕುಗೊಂಡಿರುವುದಾಗಿ ವರದಿ ತಿಳಿಸಿದೆ. ಭಾರತೀಯ ವಾಯುಪಡೆ ಕೂಡಾ ಸುಖೋಯ್‌ 30 ಯುದ್ಧ ವಿಮಾನವನ್ನು ಗಡಿಪ್ರದೇಶಕ್ಕೆ ರವಾನಿಸಿರುವ ಮಾಹಿತಿ ಖಚಿತವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next