Advertisement

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

01:40 AM Apr 26, 2024 | Team Udayavani |

ಮೊರೆನಾ: “ಸಂಪತ್ತು ಮರುಹಂಚಿಕೆ’ ಮತ್ತು “ಪಿತ್ರಾರ್ಜಿತ ಆಸ್ತಿ ತೆರಿಗೆ’ ವಿಚಾರದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, 1985ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಉತ್ತರಾಧಿಕಾರ ಕಾಯ್ದೆ ರದ್ದು ಮಾಡಿದ್ದೇಕೆ ಎನ್ನುವುದಕ್ಕೂ ಕಾರಣವೊಂದನ್ನು ನೀಡಿದ್ದಾರೆ.

Advertisement

ಮಧ್ಯಪ್ರದೇಶದ ಮೊರೆನಾದಲ್ಲಿ ಗುರುವಾರ ಚುನಾವಣ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಮೋದಿ, “ಇಂದಿರಾ ಗಾಂಧಿ ಮೃತಪಟ್ಟಾಗ ಅವರ ಆಸ್ತಿ, ಸಂಪತ್ತು ಸರಕಾರಕ್ಕೆ ಹೋಗುವುದನ್ನು ತಪ್ಪಿಸುವ ಸಲುವಾಗಿಯೇ 1985ರಲ್ಲಿ ರಾಜೀವ್‌ ಗಾಂಧಿ ಉತ್ತರಾಧಿಕಾರ ಕಾಯ್ದೆ ರದ್ದುಗೊಳಿಸಿದರು’ ಎಂದಿದ್ದಾರೆ.

ಪಿತ್ರಾರ್ಜಿತ ಆಸ್ತಿ ತೆರಿಗೆ ಮರುಜಾರಿಗೆ ಕಾಂಗ್ರೆಸ್‌ ಯೋಜಿಸಿದೆ ಎಂಬ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌, “ಈ ಹಿಂದೆ ಜಾರಿಯಲ್ಲಿದ್ದ ಈ ಕಾಯ್ದೆಯನ್ನು ರದ್ದು ಮಾಡಿದ್ದೇ ರಾಜೀವ್‌ ಗಾಂಧಿ’ ಎಂದು ತಿರುಗೇಟು ನೀಡಿತ್ತು. ಅದಕ್ಕೆ ಪ್ರತಿಯಾಗಿ ಗುರುವಾರ ಮೋದಿ ಈ ಆರೋಪ ಮಾಡಿದ್ದಾರೆ. ಎಸ್ಟೇಟ್‌ ಶುಲ್ಕ (ಪಿತ್ರಾರ್ಜಿತವಾಗಿ ಬಂದ ಚರ ಮತ್ತು ಸ್ಥಿರ ಆಸ್ತಿಯ ಮೇಲೆ ಶುಲ್ಕ) ರದ್ದತಿಯ ಲಾಭ ಪಡೆದ ಬಳಿಕ, ಈಗ ಕಾಂಗ್ರೆಸ್‌ ಮತ್ತೆ ಇದೇ ಶುಲ್ಕವನ್ನು ವಾಪಸ್‌ ಜಾರಿ ಮಾಡಲು ಹೊರಟಿದೆ ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next