Advertisement

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

01:16 AM Apr 18, 2024 | Team Udayavani |

ತಿರುವನಂತಪುರ: ಜಾಮೀನು ಮೇಲೆ ಹೊರಗಿರುವ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್‌ರಂಥ ಭ್ರಷ್ಟ ರಾಜಕಾರಣಿಯ ಪ್ರಮಾಣಪತ್ರ ತನಗೆ ಬೇಕಿಲ್ಲ ಎಂದು ಕೇರಳದ ತಿರುವನಂತಪುರ ಬಿಜೆಪಿ ಅಭ್ಯರ್ಥಿ ರಾಜೀವ್‌ ಚಂದ್ರ ಶೇಖರ್‌ ಕಿಡಿ ಕಾ ರಿದ್ದಾರೆ. ಮಂಗಳವಾರ ಕೇರಳಕ್ಕೆ ಆಗ ಮಿಸಿದ್ದ ಡಿ.ಕೆ.ಶಿವ ಕುಮಾರ್‌, “ಕೇರಳ ಅಭಿವೃದ್ಧಿಗೆ ರಾಜೀವ್‌ ಚಂದ್ರಶೇಖರ್‌ ಕೊಡುಗೆ ಏನು?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತ್ಯು ತ್ತರವಾಗಿ ಕೇಂದ್ರ ಸಚಿವ ಈ ಹೇಳಿಕೆ ನೀಡಿದ್ದಾರೆ. “ಡಿಕೆಶಿ ಯಾವ ತರಹದ ವ್ಯಕ್ತಿ ಮತ್ತು ಅವರ ರಾಜಕೀಯ, ಅವರ ಹಿನ್ನೆಲೆ ಬಗ್ಗೆ ಎಲ್ಲ ರಿಗೂ ತಿಳಿದಿದೆ. ಬೇಕಿದ್ದರೆ ಶಶಿತರೂರ್‌ ಸರ್ಟಿ ಫಿಕೆಟ್‌ ಪಡೆಯಲಿ’ ಎಂದು ವಾಗ್ಧಾಳಿ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next