Advertisement

ಮೊದಲ ಪಂದ್ಯ ಗೆದ್ದ ಖುಷಿಯಲ್ಲಿರುವ ಆರ್ ಸಿಬಿಗೆ ಶಾಕ್: ಸ್ಫೋಟಕ ಆಟಗಾರ ತಂಡದಿಂದ ಔಟ್

04:07 PM Apr 04, 2023 | Team Udayavani |

ಬೆಂಗಳೂರು: ಐಪಿಎಲ್ ಆರಂಭಿಕ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಸ್ಪೋಟಕ ಬ್ಯಾಟರ್ ನನ್ನು ಕಳೆದುಕೊಂಡಿದೆ. ಪ್ರತಿಭಾನ್ವಿತ ಆಟಗಾರ ರಜತ್ ಪಾಟಿದಾರ್ ಅವರು ಐಪಿಎಲ್ ನಿಂದಲೇ ಹೊರಬಿದ್ದಿದ್ದಾರೆ.

Advertisement

ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ರಜತ್ ಅವರು ಆರ್ ಸಿಬಿ ಪ್ರಾಂಚೈಸಿ ಕೂಡಿಕೊಂಡಿರಲಿಲ್ಲ. ಬದಲಾಗಿ ಎನ್ ಸಿಎ ನಲ್ಲಿ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದರು. ಇಂದು ಟ್ವೀಟ್ ಮಾಡಿರುವ ಆರ್ ಸಿಬಿ ರಜತ್ ಬಗ್ಗೆ ಅಪ್ಡೇಟ್ ನೀಡಿದೆ.

ದುರದೃಷ್ಟವಶಾತ್, ಹಿಮ್ಮಡಿ ಗಾಯದ ಕಾರಣದಿಂದ ರಜತ್ ಪಾಟಿದಾರ್ ಅವರು ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ರಜತ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ಚೇತರಿಕೆಯ ಸಮಯದಲ್ಲಿ ಅವರಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ. ರಜತ್‌ ಗೆ ಬದಲಿ ಆಟಗಾರನನ್ನು ಹೆಸರಿಸದಿರಲು ಕೋಚ್‌ಗಳು ಮತ್ತು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ:Success Story:ಅಂದು ಟ್ಯಾಕ್ಸಿ ಡ್ರೈವರ್…ಇಂದು 42,000 ಕೋಟಿ ರೂ. ಒಡೆಯ; ಯಾರೀವರು ಜಗತಿಯಾನಿ

ಬೆಂಗಳೂರು ತಂಡವು ಈಗಾಗಲೇ ಗಾಯದ ಕಾರಣದಿಂದ ವಿಲ್ ಜ್ಯಾಕ್ಸ್ ಅವರನ್ನು ಕಳೆದುಕೊಂಡಿದೆ. ಅವರ ಬದಲಿಗೆ ನ್ಯೂಜಿಲ್ಯಾಂಡ್ ಆಲ್ ರೌಂಡರ್ ಬ್ರೇಸ್ ವೆಲ್ ತಂಡ ಕೂಡಿಕೊಂಡಿದ್ದಾರೆ.

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಏ.6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next