Advertisement

ವ್ಯಾಕ್ಸಿನೇಶನ್ ಗೆ ವಯೋಮಿತಿ ತೆಗೆಯಿರಿ:ಕೇಂದ್ರಕ್ಕೆ ರಾಜಸ್ಥಾನ,ಪಂಜಾಬ್ ಮುಖ್ಯಮಂತ್ರಿಗಳ ಮನವಿ

03:49 PM Mar 23, 2021 | Team Udayavani |

ಜೈಪುರ :  ಕೋವಿಡ್ 19 ವ್ಯಾಕ್ಸಿನೇಶನ್ ಗೆ ವಯೋಮಿತಿಯನ್ನು ತೆಗೆದು ಹಾಕಬೇಕೆಂದು ರಾಜಸ್ಥಾನ ಹಾಗೂ ಪಂಜಾಬ್ ನ ಮುಖ್ಯಮಂತ್ರಿಗಳು ಕೇಂದ್ರವನ್ನು ಕೇಳಿಕೊಂಡಿದ್ದಾರೆ.

Advertisement

ಕೋವಿಡ್ 19 ಲಸಿಕೆಗಳನ್ನು ಎಲ್ಲಾ ವಯಸ್ಸಿನವರಿಗೆ ಲಭ್ಯವಾಗುವ ಹಾಗೆ ಮಾಡುವುದರಿಂದ ಕೋವಿಡ್ ನ ರೂಪಾಂತರಿ ಅಲೆ ಅಥವಾ ಎರಡನೇ ಅಲೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ಕೇಂದ್ರಕ್ಕೆ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಹಾಗೂ ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

ಓದಿ : ಸೂಕ್ತ ಬೆಲೆಯಿಲ್ಲದ ಕಾರಣ ಎರಡು ಎಕರೆ ಎಲೆಕೋಸಿನ ಬೆಳೆ ನಾಶ ಮಾಡಿದ ರೈತ

ಸರ್ಕಾರ ಈಗಾಗಲೇ ಕೋವಿಡ್ 19 ಲಸಿಕೆಯನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಂಡಿದೆ. ಆದರೂ, ಅತಿ ಶೀಘ್ರದಲ್ಲಿ ಹೆಚ್ಚು ಜನ ಸಂಖ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟಿಗೆ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ ಅಮರಿಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

ರೂಪಾಂತರಿ ವೈರಸ್ ವೇಗವಾಗಿ ಹಬ್ಬುತ್ತಿರುವ ಕಾರಣ ಎಲ್ಲಾ ವಯಸ್ಸಿನವರಿಗೆ ಲಸಿಕೆ ಲಭ್ಯವಾಗುವ ಹಾಗೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಅಮರಿಂದರ್ ಕೇಳಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Advertisement

ಕೋವಿಡ್ 19 ರೂಪಾಂತರಿ ವೈರಸ್ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಆತಂಕಕಾರಿಯಾಗಿ ಕಾಣಿಸುತ್ತಿದೆ. ವ್ಯಾಕ್ಸಿನೇಶನ್ ನನ್ನು ಕೇಂದ್ರ ಸರ್ಕಾರ ಜಾಸ್ತಿ ಮಾಡಬೇಕಿದೆ. ಕೋವಿಡ್ 19 ರೂಪಾಂತರಿ ವೈರಸ್ ನಿಂದ ಜನರನ್ನು ರಕ್ಷಣೆ ಮಾಡಬೇಕಿದೆ. ಆದ್ದರಿಂದ ವ್ಯಾಕ್ಸಿನೇಶನ್ ಗೆ ವಯೋ ಮಿತಿಯನ್ನು ತೆಗೆದು ಹಾಕಬೇಕು ಎಂದು ಅವರು ಹೇಳಿದ್ದಾರೆ.

ಓದಿ : ರವಿ ಪೂಜಾರಿ ಸಹಚರನ ಕೊಲೆಗೆ ಸ್ಕೆಚ್: ಮಂಗಳೂರಿನಲ್ಲಿ ನಾಲ್ವರು ರೌಡಿಶೀಟರ್ ಗಳ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next