Advertisement

Rajasthan;ಕೈ ತೊರೆದು ಕಮಲಕ್ಕೆ ಪ್ರಭಾವಿ ಬುಡಕಟ್ಟು ಶಾಸಕ

12:15 AM Feb 20, 2024 | Team Udayavani |

ಜೈಪುರ: ಅಯೋಧ್ಯೆಯ ಬಾಲಕರಾಮ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಹಾಜರಾಗದೆ, ರಾಮಮಂದಿರ ವಿಚಾರವಾಗಿ ಪಕ್ಷದ ನಾಯಕರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿರುವ ರಾಜಸ್ಥಾನ ಕಾಂಗ್ರೆಸ್‌ ಶಾಸಕ ಮಹೇಂದ್ರಜೀತ್‌ ಸಿಂಗ್‌ ಮಾಳವೀಯ, ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ.

Advertisement

ರವಿವಾರ ನಡೆದ ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದಿಂದ ಪ್ರಭಾವಿತನಾಗಿ, ಅಭಿವೃದ್ಧಿಗೋಸ್ಕರ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗುವ ನಿರ್ಧಾರ ಮಾಡಿದ್ದಾಗಿ ಅವರು ಹೇಳಿದ್ದಾರೆ. ಬುಡಕಟ್ಟು ಸಮುದಾಯದ ಪ್ರಭಾವಿ ನಾಯಕರಾಗಿರುವ ಮಾಳವೀಯ, ಬಾನ್ಸ್‌ವಾಡಾ ಜಿಲ್ಲೆಯ ಬಾಗೀದೋರಾ ಕ್ಷೇತ್ರದಿಂದ 2008ರಿಂದ ಸತತವಾಗಿ 4 ಬಾರಿ ಗೆಲುವು ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next