Advertisement

‘ಪ್ರಾಬ್ಲೇಂ ಇಲ್ಲದ ಆಸ್ಪತ್ರೆ ಎಲ್ಲಿದೆ?’: ಗೆಹ್ಲೊಟ್ ಬೇಜವಾಬ್ದಾರಿಯುತ ಹೇಳಿಕೆ

10:02 AM Jan 04, 2020 | Team Udayavani |

ಜೈಪುರ: ದೇಶದ ಪ್ರತಿಯೊಂದು ಆಸ್ಪತ್ರೆಗಳಲ್ಲಿಯೂ ಒಂದಲ್ಲ ಒಂದು ರೀತಿಯ ತೊಂದರೆ ಇದೆ ಎಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೊಟ್‌ ಹೇಳಿದ್ದು, ಇದಕ್ಕೆ ಪ್ರತಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋಟಾ ಜಿಲ್ಲೆಯ ಆಸ್ಪತ್ರೆಯಲ್ಲಿ ಮೃತ ಶಿಶುಗಳ ಸಂಖ್ಯೆ ಶುಕ್ರವಾರ 106ಕ್ಕೇರಿಕೆಯಾಗಿದೆ.

Advertisement

ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಗೆಹ್ಲೊಟ್‌ ‘ಪ್ರತಿ ಆಸ್ಪತ್ರೆಯಲ್ಲೂ ಒಂದಲ್ಲ ಒಂದು ಸಮಸ್ಯೆ ಕಾಣಸಿಗುತ್ತವೆ. ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ. ಕೇಂದ್ರ ಸಚಿವೆ ಸ್ಮತಿ ಇರಾನಿ ಪ್ರತಿಕ್ರಿಯೆ ನೀಡಿ, ರಾಜಸ್ಥಾನ ಸರಕಾರ ಶಿಶುಗಳ ಸಾವಿನ ಬಗ್ಗೆ ಹೊಣೆ ಹೊರಲು ಸಿದ್ಧವಿಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next