Advertisement

ಶೋಷಿತರಿಗೆ ಅರಸು ರಾಜಕೀಯ ಅಧಿಕಾರ: ಶ್ರೀನಿವಾಸ ಪ್ರಸಾದ್‌

12:07 PM Aug 21, 2017 | |

ಹುಣಸೂರು: ಧ್ವನಿ ಇಲ್ಲದವರಿಗೆ ಮತ್ತು ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ಡಿ.ದೇವರಾಜ ಅರಸರು ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಿಸಿದ ಧೀಮಂತ ವ್ಯಕ್ತಿ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಬಣ್ಣಿಸಿದರು.

Advertisement

ಹುಣಸೂರು ಅಂಬೇಡ್ಕರ್‌ ಭವನದಲ್ಲಿ ತಾಲೂಕು ಜನರಿಗಾಗಿ ಜಾಗತಿ ವೇದಿಕೆ ಸಮಾನತೆ ಹರಿಕಾರ ಡಿ.ದೇವರಾಜ ಅರಸರ 102ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಜನಜಾಗತಿ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

70-80ರ ದಶಕದಲ್ಲಿ ರಾಜ್ಯದ ರಾಜಕೀಯ ಇತಿಹಾಸ ಎಂದೂ ಮರೆಯಲಾಗದು. ಅಲ್ಲಿಯವರೆಗೆ ಕೆಲವೇ ಸಮುದಾಯದ ಕಪಿಮುಷ್ಟಿಯಲ್ಲಿದ್ದ ರಾಜಕೀಯ ಅಧಿಕಾರ ಅರಸರ ಆಗಮನದಿಂದಾಗಿ ಬಲಿಷ್ಟ ಸಮಾಜದ ಕಪಿಮುಷ್ಠಿಯಲ್ಲಿದ್ದ ರಾಜಕೀಯ ಅಧಿಕಾರ ಎಲ್ಲಸ್ತರಗಳ ತಳ ಸಮುದಾಯಕ್ಕೂ ಸಿಗುವಂತಾಯಿತು ಎಂದರು.

 ಅಜಾನುಬಾಹು ಅರಸರಿಂದಾಗಿ ಸಂವಿಧಾನದ ಆಶಯಗಳ ಸಮರ್ಪಕ ಜಾರಿಯಾಯಿತು. ಅಂದಿನವರೆಗೂ ಅಧಿಕಾರವನ್ನೇ ಅನುಭವಿಸದವರನ್ನು ಹೆಕ್ಕಿ ಹುಡುಕಿ ಅವರಿಗೆ ಅಧಿಕಾರ ನೀಡಿದ ಧೀಮಂತ ವ್ಯಕ್ತಿತ್ವ ಅರಸರದ್ದಾಗಿತ್ತೆಂದರು.

ಮಾಜಿ ಸಚಿವ ಎಚ್‌.ವಿಶ್ವನಾಥ್‌, ಕ್ಷಮಾಗುಣ ಮತ್ತು ಕೃತಜ್ಞತೆ ಅರಸರಲ್ಲಿ ಎದ್ದು ಕಾಣುವ ಗುಣಗಳಾಗಿವೆ. ದೇಶದೆಲ್ಲೆಡೆ ತುರ್ತುಸ್ಥಿತಿ ತನ್ನ ಕರಾಳಮುಖವನ್ನು ತೋರಿದರೆ, ರಾಜ್ಯದಲ್ಲಿ ಅದನ್ನೇ ಲಾಭವನ್ನಾಗಿಸಿಕೊಂಡ ಅರಸರು. ನನ್ನಂತಹ ನೂರಾರು ಮಂದಿಯನ್ನು ಕರೆತಂದು ರಾಜಕೀಯ ಅಧಿಕಾರ ಕೊಟ್ಟು ನಾಯಕನ್ನಾಗಿಸಿದ ಸಾಧಕರು ಎಂದು ಹೇಳಿದರು.

Advertisement

ತಾನು ಬರೆದ 6 ಪುಸ್ತಕಗಳಲ್ಲಿ ಅರಸರನ್ನು ಉಲ್ಲೇಖೀಸಿದ್ದೇನೆ. ಹಳ್ಳಿ ಹಕ್ಕಿ ಹಾಡು ಪುಸ್ತಕ ಅರಸರ ಜೀವನಚರಿತ್ರೆಯಾದರೂ ಅದು ನನ್ನ ಆತ್ಮಕಥೆಯಾಗಿ ಬರೆದುಕೊಂಡಿದ್ದೇನೆ. ತುರ್ತುಸ್ಥಿತಿಯನ್ನು ಲಾಭದಾಯಕವಾಗಿ ಮಾಡಿಕೊಂಡು ಚಾಣಾಕ್ಷತೆ ಮೆರೆದ ಅವರು ಆ ಸಂದರ್ಭವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಭೂಸುಧಾರಣಾ ಕಾಯ್ದೆಯಂತಹ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಿದರೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್‌.ಪಿ.ಮಂಜುನಾಥ್‌, ಅರಸರು ಹುಟ್ಟುಹಾಕಿದ ಉದ್ದೂರು ಕಾವಲ್‌ ಸೊಸೈಟಿ 781 ಸದಸ್ಯರಿಗೆ 40 ವರ್ಷಗಳ ನಂತರ ಹಕ್ಕುಪತ್ರ ನೀಡುವ ಸೌಭಾಗ್ಯ ತಮ್ಮದು. ಅರಸರ ಆದರ್ಶಗಳ ಕರಗತವಲ್ಲದಿದ್ದರೂ ಪಾಲನೆ ಮಾತ್ರ ಗೊತ್ತು. ಅರಸರ ಹುಟ್ಟೂರು ಅಭಿವೃದ್ಧಿ ಕುರಿತು ಸಾಕಷ್ಟು ಟೀಕೆಗಳು ಬರುತ್ತಿದ್ದು, ಟೀಕೆಗೆ ಬೆದರೋನು ನಾನಲ್ಲ ಎಂದರು.

ತಾಲೂಕಿನಲ್ಲಿ ಕೋಮು ಸಾಮರಸ್ಯಕ್ಕಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದ್ದು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಪೊಲೀಸ್‌ ಇಲಾಖೆಯೂ ಆ ಪದಕ್ಕೆ ಅರ್ಥ ಬರುವಂತೆ ಕೆಲಸ ನಿರ್ವಹಿಸಬೇಕು. ರೌಡಿ ಪೊಲೀಸ್‌ ಆಗಲು ತಾವೆಂದೂ ಬಿಡೊಲ್ಲವೆಂದು ಎಚ್ಚರಿಸಿದರು.

ವೇದಿಕೆ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಗೌರವಾಧ್ಯಕ್ಷ ನಾಗರಾಜಮಲ್ಲಾಡಿ, ಡೀಡ್‌ ಶ್ರೀಕಾಂತ್‌ ಹರಿಹರಾನಂದಸ್ವಾಮಿ ಹಾಗೂ ವಿವಿಧ ಸಮುದಾಯದ ಮುಖಂಡರು ಮಾತನಾಡಿದರು. ಸಮಾವೇಶದಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ನಿಂಗರಾಜ ಮಲ್ಲಾಡಿ, ಸದಸ್ಯರಾದ ಡಿ.ಕುಮಾರ್‌, ಸತ್ಯಪ್ಪ, ಕೆಂಪರಾಜು, ಅಣ್ಣಯ್ಯನಾಯಕ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿಳಿಕೆರೆ ಮಂಜುನಾಥ್‌, ಡಾ.ತಿಮ್ಮಯ್ಯ, ಲ್ಯಾಂಪ್ಸ್‌ ಕೃಷ್ಣಯ್ಯ, ಆದಿವಾಸಿ ಮುಖಂಡ ಜೆ.ಕೆ.ರಾಮು ಮತ್ತಿತರರಿದ್ದರು.

ಸಿಎಂರಿಂದ ಅರಸರ ಹುಟ್ಟೂರು ಅಭಿವೃದ್ಧಿ
ಅರಸರ ಹುಟ್ಟೂರು ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣರಾಗಲೀ, ಯಡಿಯೂರಪ್ಪನವರಾಗಲೀ ಬಿಡಿಗಾಸೂ ಕೊಟ್ಟಿಲ್ಲ. ಅದೇನಾದರೂ ನಿಜವೇ ಆಗಿದ್ದರೆ ತಾನು ಈ ಕ್ಷಣದಲ್ಲೇ ರಾಜೀನಾಮೆ ನೀಡಿ ರಾಜಕೀಯ ಬಿಡುತ್ತೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಥಮವಾಗಿ ಬಜೆಟ್‌ನಲ್ಲೇ ಘೋಷಿಸಿ, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಹಾಗೂ ಕಲ್ಲಹಳ್ಳಿಗೆ ತಲಾ 10 ಕೋಟಿ ರೂ.ಅನುದಾನ ನೀಡಿ ದತ್ತುಗ್ರಾಮವಾಗಿ ಪಡೆದು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಂಡಿದ್ದಾರೆಂದು ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next