Advertisement

ರಾಜ್‌ ಕುಂದ್ರಾಗೆ ಬಂಧನದಿಂದ ರಕ್ಷಣೆ

11:55 PM Aug 18, 2021 | Team Udayavani |

ಮುಂಬಯಿ: ನೀಲಿ ಚಿತ್ರಗಳ ನಿರ್ಮಾಣ ಆರೋಪಕ್ಕೆ ಬಂಧಿತರಾಗಿರುವ ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಬಾಂಬೆ ಹೈ ಕೋರ್ಟ್‌ ಮಧ್ಯಾಂತರ ರಕ್ಷಣೆ ನೀಡಿದೆ.

Advertisement

ಇದೇ ಪ್ರಕರಣಕ್ಕೆ ಅವರು ಜುಲೈಯ‌ಲ್ಲಿ ಬಂಧಿತರಾಗಿದ್ದು ಜೈಲಿನಲ್ಲಿ ಇದ್ದಾರೆ. ಆ.25ರಂದು ಬಾಂಬೆ ಹೈಕೋರ್ಟ್‌ ಅವರ ಅರ್ಜಿಯ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ. ಹೀಗಾಗಿ, 2020ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದ್ರಾ ಅವರನ್ನು ಪೊಲೀಸರು ಮತ್ತೆ ಬಂಧಿಸದಂತೆ ಮಧ್ಯಾಂತರ ರಕ್ಷಣೆ ನೀಡಿರುವುದಾಗಿ ನ್ಯಾ| ಎಸ್‌.ಕೆ.ಶಿಂಧೆ ನೇತೃತ್ವದ ನ್ಯಾಯಪೀಠ ಬುಧವಾರ ತಿಳಿಸಿದೆ.

ಕುಂದ್ರಾ  ಜಾಮೀನು ಅರ್ಜಿಯನ್ನು ಕೆಳ ಹಂತದ ನ್ಯಾಯಾಲಯ  ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ಮತ್ತೋರ್ವ ಆರೋಪಿಗೆ ಜಾಮೀನು ನೀಡಿರುವಂತೆಯೇ ರಾಜ್‌ ಕುಂದ್ರಾಗೂ ಜಾಮೀನು ನೀಡಬೇಕೆಂದು ಅವರ ಪರ ವಕೀಲರು ವಾದಿಸಿದ್ದರು. ಆದರೆ ಪ್ರಕರಣದಲ್ಲಿ ರಾಜ್‌ ಕುಂದ್ರಾ ಪಾತ್ರ ಬೇರೆಯದ್ದೇ ರೀತಿಯಲ್ಲಿದೆ, ಹಾಗಾಗಿ ಜಾಮೀನು ನೀಡಬಾರದು ಎಂದು ಹೆಚ್ಚುವರಿ ಸರಕಾರಿ ವಕೀಲೆ ಪ್ರಜಕ್ತಾ ಶಿಂಧೆ ವಿರೋಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next