Advertisement

ಸಿಂಡಿಕೇಟ್ ಸರ್ಕಲ್ ಬಳಿ ಸಮುಚ್ಚಯಕ್ಕೆ ನುಗ್ಗಿದ ಮಳೆ ನೀರು; ಲಕ್ಷಾಂತರ ರೂ ನಷ್ಟ

11:11 AM Jun 11, 2020 | keerthan |

ಉಡುಪಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಸಮೀಪದ ಹೆದ್ದಾರಿ ಬದಿಯ ಪ್ರೀಮಿಯರ್ ಎನ್ ಕ್ಲೇವ್ ಕಟ್ಟದ ಆವರಣದೊಳಗೆ ಮಳೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.

Advertisement

ಬುಧವಾರ ರಾತ್ರಿ ನಗರದಲ್ಲಿ ಭಾರಿ ಮಳೆಯಾಗಿದೆ. ಈ ವೇಳೆ ಹೆದ್ದಾರಿ ಬದಿಯ ಚರಂಡಿ ಅಸಮರ್ಪಕ ವ್ಯವಸ್ಥೆಯಿಂದ ಸಮುಚ್ಛಯದ ಆವರಣದೊಳಗೆ ನೀರು ಉಕ್ಕಿ ಹರಿದಿದೆ. ಕಟ್ಟಡದ ಜನರೇಟರ್, ವಿದ್ಯುತ್ ಟ್ರಾನ್ಸ್ ಪಾರ್ಮರ್ ಎಲ್ಲವೂ ಕೊಚ್ಚಿಕೊಂಡು ಹೋಗಿದ್ದು ಸುಮಾರು 50 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಕಟ್ಟಡ ಒಂದು ಭಾಗದ ಕಾಂಪೌಂಡ್ ಕುಸಿತದ ಭೀತಿಯಲ್ಲಿದ್ದು,ವಸತಿ ಸಮುಚ್ಚಯ ಅಪಾಯದ ಸ್ಥಿತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next