Advertisement

ಮಳೆಯೋ, ಭೂಕಂಪವೋ?

10:25 AM Sep 17, 2017 | Team Udayavani |

ಬಜಪೆ: ವಿಮಾನ ನಿಲ್ದಾಣದ ಪರಿಸರದಲ್ಲಿ ಶುಕ್ರವಾರ ರಾತ್ರಿ ಸುರಿದ ಜಡಿಮಳೆಗೆ ಬಜಪೆಯಿಂದ ಹಳೆ ವಿಮಾನ ನಿಲ್ದಾಣವಾಗಿ ಉಣಿಲೆ- ಕೊಳಂಬೆ ಅದ್ಯಪಾಡಿ ಜಿಲ್ಲಾ ಪಂಚಾಯತ್‌ ರಸ್ತೆಯ ಡಾಮರು ಸಂಪೂರ್ಣ ಎದ್ದು ಹೋಗಿದ್ದು, ಭೂಕಂಪವಾದ ಪ್ರದೇಶದಂತಾಗಿದೆ. ಶುಕ್ರವಾರ ಸಂಜೆಯವರೆಗೂ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆ ರಾತ್ರಿ ಬೆಳಗಾಗುವುದರೊಳಗೆ ಈ ಸ್ಥಿತಿಗೆ ತಲುಪಿದ್ದನ್ನು ಕಂಡ ಗ್ರಾಮಸ್ಥರು ಹೌಹಾರಿದ್ದಾರೆ. ವಿಶೇಷ ಎಂದರೆ 15 ದಿನಗಳ ಹಿಂದೆಯಷ್ಟೆ ಗ್ರಾಮ  ಪಂಚಾಯತ್‌ ಈ ರಸ್ತೆಯನ್ನು ದುರಸ್ತಿ ಮಾಡಿತ್ತು. 

Advertisement

ಈ ಪ್ರದೇಶದಲ್ಲಿ ರಾತ್ರಿಪೂರ್ತಿ ಉತ್ತಮ ಮಳೆಯಾಗಿ, ಗುಡ್ಡ ಕುಸಿದು ನೀರು ರಸ್ತೆ ಮೇಲೆ ಹರಿಯಿತು. ಮಣ್ಣು ಸಡಿಲವಾಗಿದ್ದರಿಂದ ನೀರು ಹರಿಯುತ್ತಲೇ ಡಾಮರು ಪದರ, ಪದರವಾಗಿ ಎದ್ದಿದೆ. ಯಾವುದೇ ಕ್ಷಣ ರಸ್ತೆ ಕುಸಿಯುವ ಅಪಾಯವೂ ಇದೆ.

ರಸ್ತೆ ಬದಿಯಲ್ಲಿದ್ದ ಪಂಚಾಯತ್‌ನ ನೀರಿನ ಪೈಪ್‌ಗ್ೂ ಹಾನಿಯಾಗಿದೆ. ಈ ಪರಿಸರದ ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಅದ್ಯಪಾಡಿ, ಕೊಳಂಬೆ ಗ್ರಾಮಸ್ಥರು ಬಜಪೆ ಕೆಂಜಾರು ಮೂಲಕ ಸಂಚರಿಸುವುದು ಅನಿ ವಾರ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next