Advertisement
ರೈಲ್ವೇ ಕ್ರಾಸಿಂಗ್ ಜಾಗೃತಿಇದು ದೇಶದೆಲ್ಲೆಡೆ ನಡೆಸುತ್ತಿರುವ ರೈಲ್ವೇ ಕ್ರಾಸಿಂಗ್ ಜಾಗೃತಿ ಅಭಿಯಾನದ ಪ್ರಾತ್ಯಕ್ಷಿಕೆ, ಜಿಲ್ಲೆಯ ಕೊಂಕಣ ರೈಲ್ವೇ ಕಾರ್ಪೊರೇಶನ್ ಸಂಸ್ಥೆಯು ಮೇ 15ರಿಂದ ಜೂ.16ರ ವರೆಗೆ ಹಮ್ಮಿಕೊಂಡಿದೆ. ಮಂಗಳೂರು ಪ್ರಾದೇಶಿಕ ಸಂಚಾರದ ಪ್ರಬಂಧಕ ಎಸ್. ವಿನಯ ಕುಮಾರ್ ನೇತೃತ್ವದಲ್ಲಿ ಕಮರ್ಷಿಯಲ್ ಸೂಪರ್ವೈಸರ್ ನಾಗಪತಿ ಹೆಗ್ಡೆ ಹಾಗೂ ಮಧುಕುಮಾರ್ ಶೆಟ್ಟಿ ಅವರು ಸಿಬಂದಿಗಳೊಂದಿಗೆ ರೈಲ್ವೇ ಕ್ರಾಸಿಂಗ್ನಲ್ಲಿ ಯಾವ ರೀತಿಯಲ್ಲಿ ಜನರು ಉದ್ವೇಗದಿಂದ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ವಿವಿಧ ದೃಶ್ಯ ರೂಪಕದ
ಮೂಲಕ ಪ್ರದರ್ಶಿಸಿದರು.
ರೈಲ್ವೇ ಕ್ರಾಸಿಂಗ್ನಲ್ಲಿ ಗಲಾಟೆ ನಡೆಯುತ್ತಿದೆ ಎಂದು ಮನೆಯವರು ತಿಳಿಸಿದ ತತ್ಕ್ಷಣ ನಾನು ಓಡಿ ಬಂದೆ. ಇಲ್ಲಿ ಬಂದು ನೋಡುವಾಗ ಇವೆಲ್ಲಾ ನಮಗೆ ಜಾಗೃತಿ ಮೂಡಿಸುವ ನಾಟಕ ಎಂದು ಗೊತ್ತಾಯಿತು. ಇಂತಹ ಜಾಗೃತಿ ಒಳ್ಳೆಯದೆ ಇಲಾಖೆ ಸ್ಪಂದಿಸುವಾಗ ನಾವು ಸಹಕರಿಸಬೇಕು.
-ಜಯಶೀಲ ಕೋಟ್ಯಾನ್
ಸ್ಥಳೀಯ ನಿವಾಸಿ
Related Articles
ಜನರಿಗೆ ಉತ್ತಮ ಸೇವೆ ಸಲ್ಲಿಸಲು ರೈಲ್ವೇ ಇಲಾಖೆಗೆ ಜನರು ಮುಕ್ತವಾಗಿ ಸಹಾಯ ಮಾಡಿದಲ್ಲಿ ಮಾತ್ರ ಸೇವೆಯ ಕರ್ತವ್ಯ ನಿರ್ವಹಿಸಲು ಸಾಧ್ಯ. ಈ ರೀತಿಯ ಜಾಗೃತಿ ಅಭಿಯಾನವನ್ನು ಒಂದು ತಿಂಗಳಲ್ಲಿ ಹಮ್ಮಿಕೊಂಡಿದ್ದು ಕೊಂಕಣ ರೈಲ್ವೆಯ 92 ರೈಲ್ವೇ ಗೇಟಿನಲ್ಲಿ ಈ ಅಭಿಯಾನ ನಡೆಯಲಿದೆ.
– ಕೆ. ಸುಧಾ ಕೃಷ್ಣಮೂರ್ತಿ
ಸಾರ್ವಜನಿಕ ಸಂಪರ್ಕಾಧಿಕಾರಿ,
ಕೊಂಕಣ್ ರೈಲ್ವೇ ಮಂಗಳೂರು
Advertisement