Advertisement

ರೈಲ್ವೇ ಮೇಲ್ಸೇತುವೆ, ರಸ್ತೆ ವಿಸ್ತರಣೆ; ಇಲ್ಲಿನ ಬಹುಕಾಲದ ಬೇಡಿಕೆ

10:17 PM Aug 06, 2021 | Team Udayavani |

ಜನ, ವಾಹನ ಸಂಚಾರಕ್ಕೆ ರಸ್ತೆ, ಮೇಲ್ಸೇತುವೆ ಸೌಲಭ್ಯ ಅತೀ ಅಗತ್ಯ. ಆದರೆ ಹಳೆಯಂಗಡಿ ಗ್ರಾಮದಲ್ಲಿ ಇದೇ ಪ್ರಮುಖ ಸಮಸ್ಯೆಯಾಗಿ ಬಹುಕಾಲದಿಂದ ಕಾಡುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲಿ ಎಂದು “ಉದಯವಾಣಿ ಸುದಿನ’ದ ಇಂದಿನ “ಒಂದು ಊರು – ಹಲವು ದೂರು’ ಸರಣಿಯಲ್ಲಿ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.

Advertisement

ಹಳೆಯಂಗಡಿ: ಬೆಳೆಯುತ್ತಿರುವ ಪಟ್ಟಣದ ಸಾಲಿನಲ್ಲಿರುವ ಹಳೆಯಂಗಡಿ ಗ್ರಾ.ಪಂ.ನ ಹಳೆಯಂಗಡಿ ಗ್ರಾಮದಲ್ಲಿ ಪ್ರಮುಖ ಸಮಸ್ಯೆ ಎಂದರೆ ಇಲ್ಲಿನ ಇಂದಿರಾನಗರದ ರೈಲ್ವೇ ಗೇಟ್‌ನಲ್ಲಿ ಅಗತ್ಯವಾಗಿರುವ ಮೇಲ್ಸೇತುವೆ ಹಾಗೂ ಆದೇ ರಸ್ತೆಯ ವಿಸ್ತರಣೆ ಆಗಬೇಕಿರುವುದಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಿಂದ ಪಕ್ಷಿಕೆರೆಯಾಗಿ ಕಿನ್ನಿ ಗೋಳಿ, ಕಟೀಲು, ಮೂಡುಬಿದಿರೆಯನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಹೆದ್ದಾರಿಯಿಂದ ಇಂದಿರಾನಗರದ ತಿರುವಿನ ವರೆಗೆ ಸುಮಾರು 500 ಮೀ. ಅಂತರದಲ್ಲಿ ಇರುವ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾತ್ರ ಸಾಗಿದ್ದು, ಈ ವರೆಗೆ ಸೂಕ್ತ ವ್ಯವಸ್ಥೆ ನಡೆದಿಲ್ಲ. ಈ ರಸ್ತೆಯು ರೈಲ್ವೇ ಗೇಟ್‌ನ ವರೆಗೆ ವಿಸ್ತರಣೆಯಲ್ಲಿದ್ದರೂ ಅನಂತರ ಖಾಸಗಿ ಜಮೀನು ಸಮಸ್ಯೆಯಿಂದ ಹೆದ್ದಾರಿಯ ಸಂಪರ್ಕದವರೆಗೆ ಕಿರಿದಾಗಿದೆ. ಈ ರಸ್ತೆಯಲ್ಲಿ ಅತೀ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಇಕ್ಕೆಲಗಳಲ್ಲಿ ಚರಂಡಿ ಸಮಸ್ಯೆಯೂ ಕಂಡು ಬಂದಿದೆ.

ಮೇಲ್ಸೇತುವೆ ನಿರ್ಮಾಣಕ್ಕೆ ಕೊಂಕಣ ರೈಲ್ವೇ ಇಲಾಖೆಯು ಸಜ್ಜಾಗಿದ್ದರೂ ಶೇ. 50 ಪಾಲುದಾರಿಕೆಯ ಯೋಜನೆ ಯನ್ನು ಹೊಂದಿರುವ ರಾಜ್ಯ ಸರಕಾರವು ಜಮೀನು ಸಹಿತ ಅನುದಾನ ನೀಡುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈಗಾ ಗಲೇ ಐದು ಬಾರಿ ಯೋಜನೆಯನ್ನು ರೂಪಿಸಿದ್ದರೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ. ಅದರೂ ಇನ್ನೂ ಆಶಾದಾಯಕವಾಗಿ ಜನಪ್ರತಿನಿಧಿಗಳ ಮೇಲೆ ಜನರು ವಿಶ್ವಾಸವಿರಿಸಿದ್ದಾರೆ.

ಇದನ್ನೂ ಓದಿ:ಅಗ್ನಿಪರೀಕ್ಷೆ ಎದುರಿಸಿ ಬಂದಿದ್ದೇನೆ: ಭಾವುಕರಾಗಿ ನುಡಿದ ಸಚಿವೆ ಶಶಿಕಲಾ ಜೊಲ್ಲೆ

ಈ ರೈಲ್ವೇ ಗೇಟ್‌ನಲ್ಲಿ ಗೇಟ್‌ ಬಿದ್ದರೆ ಸುಮಾರು 10ರಿಂದ 15 ನಿಮಿಷಗಳಿರುತ್ತವೆ. ಖಾಸಗಿ ಬಸ್‌ಗಳ ಸಮಯ ಪರಿಪಾಲನೆ ಸಹಿತ ಹತ್ತಿರದಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ಸಹ ತೀವ್ರ ತೊಂದರೆ ಅನುಭವಿಸಿದ್ದಾರೆ. ತುರ್ತಾಗಿ ತೆರಳಬೇಕಾದಾಗ ಗೇಟ್‌ ಬಿದ್ದಲ್ಲಿ ರಸ್ತೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಇದೆ.

Advertisement

ಇತರ ಸಮಸ್ಯೆಗಳೇನು?
– ಹಳೆಯಂಗಡಿಯ ಹೆದ್ದಾರಿ, ಸಾಗ್‌, ಇಂದಿರಾನಗರದಲ್ಲಿ ತ್ಯಾಜ್ಯ ಸಂಗ್ರಹ ಸಮಸ್ಯೆ ಎದ್ದುಕಾಣುತ್ತಿದೆ.
– ಸಾಗ್‌, ಇಂದಿರಾನಗರದ ಜನವಸತಿ ಪ್ರದೇಶದಲ್ಲಿ ಚರಂಡಿ ಸಮಸ್ಯೆಯಿಂದಾಗಿ ಮಳೆ ಬಂದಾಗ ರಸ್ತೆಯಲ್ಲೇ ನೀರು ಹರಿಯುತ್ತದೆ.
– ಹಳೆಯಂಗಡಿಯ ಮುಖ್ಯ ಜಂಕ್ಷನ್‌ನಲ್ಲಿ ಸರ್ವಿಸ್‌ ರಸ್ತೆಯ ನಿರ್ಮಾಣಕ್ಕೆ ಭೂಸ್ವಾಧೀನವಾಗಿದ್ದರೂ ಕಾಮಗಾರಿ ಆರಂಭವಾಗದೆ ಯೋಜನೆ ನನೆಗುದಿಗೆ ಬಿದ್ದಿದೆ.
– ಹಳೆಯಂಗಡಿ ಪೇಟೆಯಿಂದ ಸಸಿಹಿತ್ಲು, ಪಾವಂಜೆ, ಕೊಳುವೈಲು ಸಂಪರ್ಕಿಸುವ ಒಳ ಮಾರ್ಗವಾಗಿರುವ ಹರಿ ಭಟ್‌ ರಸ್ತೆಯ ವಿಸ್ತರಣೆಯಾಗಬೇಕಾಗಿದೆ.
– ಕರಿತೋಟ ಪ್ರದೇಶದಲ್ಲಿ ಕೃಷಿ ಭೂಮಿಗೆ ನೆರೆ ಹಾವಳಿ ಹಾಗೂ ಉಪ್ಪು ನೀರಿನಿಂದ ತೊಂದರೆಯಾಗುತ್ತಿದೆ. ಇದಕ್ಕೆ ತಡೆಗೋಡೆ ನಿರ್ಮಾಣವಾಗಬೇಕಾಗಿದೆ.

ಸೇತುವೆ ಮರೀಚಿಕೆ
ಆರು ವರ್ಷಗಳ ಹಿಂದೆ ಸ್ಥಳೀಯ ಸಂಘಟನೆ ಯೊಂದು ಕಾರ್ಡ್‌ ಚಳವಳಿ, ಸಹಿ ಸಂಗ್ರಹ ಅಭಿಯಾನ ನಡೆಸಿತ್ತು. ಹಳೆಯಂಗಡಿ ಪಂ. ನಲ್ಲಿ ಹಕ್ಕೊತ್ತಾಯದ ನಿರ್ಣಯ ಕೈಗೊಂಡು 10 ವರ್ಷಗಳಾಗಿವೆ. ನಾಲ್ಕು ವರ್ಷಗಳ ಹಿಂದೆ ಕಿನ್ನಿಗೋಳಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯೋರ್ವಳು ನೇರವಾಗಿ ಪ್ರಧಾನಿಗೆ ಪತ್ರ ಬರೆದು ಬೆಳಕಿಗೆ ಬಂದಿದ್ದರೂ ಅಧಿಕಾರಿಗಳು ಬಂದರೇ ವಿನಃ ಸೇತುವೆ ಮರೀಚಿಕೆಯಾಗಿದೆ. ಕಿನ್ನಿಗೋಳಿ ಸರ್ವಿಸ್‌ ಬಸ್‌ ಸಂಘಟನೆಯು ಪ್ರತಿಭಟನೆಯನ್ನು ನಡೆಸಿತ್ತು. ರೈಲ್ವೇ ಗೇಟ್‌ನಲ್ಲಿ ರಸ್ತೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಂತಾ ರಾಷ್ಟ್ರೀಯ ಸಂಸ್ಥೆಯೊಂದು ರಸ್ತೆ ಸುರಕ್ಷೆಗಾಗಿ ನಿರ್ಮಿಸಿದ ತಡೆಗೋಡೆಗೆ ಹಾನಿ ಮಾಡ ಲಾಗಿದೆ. ಹತ್ತಾರು ವರ್ಷಗಳಿಂದ ಮೇಲ್ಸೇ ತುವೆ ರಚಿಸಲು ಸಂಸದರು, ಶಾಸಕರು, ಅಧಿಕಾರಿಗಳು, ಎಂಜಿನಿಯರ್‌ಗಳು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸುವ ಕೆಲಸ ನಡೆಯುತ್ತಲೇ ಇದೆ.

-ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next