Advertisement

ರಾಯಚೂರು:ಕೋವಿಡ್ ಸೋಂಕಿಗೆ ಇಬ್ಬರು ಸಾವು! 91 ಜನರಿಗೆ ಸೋಂಕು ದೃಢ

10:57 AM Aug 06, 2020 | sudhir |

ರಾಯಚೂರು: ಜಿಲ್ಲೆಯಲ್ಲಿ ಬುಧವಾರ ಕೋವಿಡ್ ವೈರಸ್‌ನಿಂದ ಮತ್ತೆ ಎರಡು ಸಾವು ಸಂಭವಿಸಿದ್ದು, 91 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ.

Advertisement

ತೀವ್ರ ಉಸಿರಾಟ, ಕೆಮ್ಮಿನಿಂದ ಬಳಲುತ್ತಿದ್ದ ರಾಯಚೂರು ಉಪ ವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ಮತ್ತು ಕೆಮ್ಮು, ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ರಿಮ್ಸ್‌ಗೆ ದಾಖಲಿಸಲಾಗಿತ್ತು. ಬಳಿಕ ಸಂಜೆ ಒಪೆಕ್‌ನಲ್ಲಿ ಚಿಕಿತ್ಸೆಗೆ ದಾಖಲಿಸಿದಾಗ ಮೃತಪಟ್ಟಿದ್ದಾರೆ. ಈ ಮೊದಲು ಇವರು ಮೊದಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಜಿಲ್ಲೆಯಲ್ಲಿ ಬುಧವಾರ 91 ಕೋವಿಡ್ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ರಾಯಚೂರು ತಾಲೂಕಿನಲ್ಲಿ 58, ಮಾನ್ವಿ 5, ಲಿಂಗಸೂಗೂರು 8, ಸಿಂಧನೂರು 18, ದೇವದುರ್ಗ 2 ಪ್ರಕರಣಗಳು ದೃಢಪಟ್ಟಿವೆ. ಎಲ್ಲ ಪ್ರಕರಣಗಳು ಸಂಪರ್ಕದಿಂದಲೇ ಹರಡಿದ್ದು, ಪತ್ತೆ ಹಚ್ಚಲಾಗುತ್ತಿದೆ. ಈವರೆಗೆ 2,941 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಂತಾಗಿದೆ. ಮಂಗಳವಾರ 110 ಜನರು ಸೇರಿದಂತೆ 1,991 ಜನ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪಿ-103918, ಪಿ-119471 ಸಂಖ್ಯೆಯ ರೋಗಿಗಳಿಬ್ಬರು ಕೋವಿಡ್‌ 19ನಿಂದ ಮೃತಪಟ್ಟಿದ್ದು ದೃಢಪಟ್ಟಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನಿಂದ 48, ಲಿಂಗಸೂಗೂರು 62, ಮಾನ್ವಿ ತಾಲೂಕಿನಿಂದ 91, ಸಿಂಧನೂರು 40 ಮತ್ತು ರಾಯಚೂರು ತಾಲೂಕಿನಿಂದ 23 ಸೇರಿ 264 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್‌ -19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next