Advertisement

ಕೋವಿಡ್ ಹೆಸರಲ್ಲಿ ಹಣ ದೋಚುತ್ತಿದೆ ಬಿಜೆಪಿ

01:24 PM Aug 03, 2020 | Suhan S |

ಸಿಂಧನೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಚರಿಸುತ್ತಿರುವುದು ವರ್ಷದ ಸಾಧನೆ ಅಲ್ಲ; ಅವರದ್ದು ಕೋವಿಡ್ ಹೆಸರಿನಲ್ಲಿ ಸತ್ತ ಹೆಣಗಳ ಮೇಲೆ ಹಣ ದೋಚುವ ಸಾಧನೆ ಎಂದು ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಗಂಭೀರವಾಗಿ ಆರೋಪಿಸಿದರು.

Advertisement

ನಗರದ ಯುವ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ರವಿವಾರ ಬಿಜೆಪಿ ಭ್ರಷ್ಟಾಚಾರದ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೋವಿಡ್ ಹೆಸರಿನಲ್ಲಿ 2,200 ಕೋಟಿ ರೂ.ನಷ್ಟು ಮುಖ್ಯಮಂತ್ರಿಗಳು ಸೇರಿದಂತೆ ಕೆಲ ಸಚಿವರು ಲೂಟಿ ಮಾಡಿದ್ದಾರೆ. ಇಂಥವರ ವಿರುದ್ಧ ನಮ್ಮ ರಾಜ್ಯ ನಾಯಕರು ಪ್ರತಿಭಟಿಸುವ ಕೆಲಸ ಮಾಡುತ್ತಿದ್ದಾರೆ. ಮಾಸ್ಕ್, ಪಿಪಿಇ ಕಿಟ್‌ ಸೇರಿದಂತೆ ಇತರ ಅನೇಕ ವಸ್ತುಗಳಲ್ಲಿ ಹಗರಣವೆಸಗಿ ಜನರಿಗೆ ಮೋಸ ಮಾಡಿದ್ದಾರೆ. ಇವರು ತಮ್ಮ ಪಕ್ಷದ ಸಾಧನೆ ಹೇಳಲು ಹೊರಟಿಲ್ಲ ಬದಲಾಗಿ ಪಕ್ಷಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳಲು ರಾಜ್ಯದಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಅವಕಾಶ ಕೊಡುವುದಿಲ್ಲ. ಅವರು ತಮ್ಮ ರಾಜಕೀಯಕ್ಕಾಗಿ ಏನೆಲ್ಲ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಈಗಾಗಲೇ ಎಳೆಎಳೆಯಾಗಿ ಬಿಚ್ಚಿಡುವ ಕೆಲಸ ಕೆಪಿಸಿಸಿ ಅಧ್ಯಕ್ಷರು, ಮಾಜಿ ಸಿಎಂ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು. ಆಯಾ ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ

ಕೋವಿಡ್ ಗೆ ಸಂಬಂಧಿ ಸಿದಂತೆ ಮಾಹಿತಿ ಸಂಗ್ರಹಿಸಲು ಪಕ್ಷದ ಕಾರ್ಯಕರ್ತರಲ್ಲಿ ಇಬ್ಬರನ್ನು ನೇಮಕ ಮಾಡಲಾಗಿದೆ. ಅವರಿಗೆ 2 ಲಕ್ಷ ರೂ. ಇನ್ಶೂರೆನ್ಸ್‌ ಹಾಗೂ ಸೌಲಭ್ಯ ಒದಗಿಸುವ ಕೆಲಸ ಆಯಾ ಸ್ಥಳೀಯ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದರು ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಚುನಾವಣೆಯಿಂದ ಮುಂದೆ ಬಂದಿಲ್ಲ. ಶಾಸಕರನ್ನು ಖರೀದಿಸಿ ಮುಂದೆ ಬಂದಿದೆ. ಬಿಜೆಪಿ ಸುಳ್ಳಿನ ಪಕ್ಷ ಎಂದು ಆರೋಪಿಸಿದರು.

ಈ ವೇಳೆ ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಖಾಜಾ ಹುಸೇನ್‌ ರೌಡಕುಂದ, ಚನ್ನಬಸವರಾಜ ಉಪ್ಪಳ, ದಾಕ್ಷಾಯಿಣಿ ಬಸನಗೌಡ, ಸುಜಾತಾ ಚನ್ನಬಸವಸ್ವಾಮಿ, ಪ್ರಭು ದೇವರಗುಡಿ, ಮಲ್ಲಯ್ಯ ನಾಯಕ ಗೋನವಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next