Advertisement

ಎಐಸಿಸಿ ಅಧ್ಯಕ್ಷರಾಗಲು ರಾಹುಲ್‌ ನಾಲಾಯಕ್‌

06:20 AM Sep 29, 2018 | Team Udayavani |

ಕೊಪ್ಪಳ: ಪ್ರಧಾನಿ ಮೋದಿ ಬಗ್ಗೆ ರಾಹುಲ್‌ ಗಾಂಧಿ ಕೀಳುಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರಾಗಲೂ ಅವರು ನಾಲಾಯಕ್‌ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಗಂಭೀರ ಆರೋಪ ಮಾಡಿದ್ದಾರೆ. 

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಯುದ್ಧ ವಿಮಾನಗಳ ಖರೀದಿಯಲ್ಲಿ ಕಾಂಗ್ರೆಸ್‌ ಬಾಯಿಗೆ ಬಂದಂತೆ ಮಾತನಾಡುತ್ತಿದೆ. ರಾಹುಲ್‌ ಗಾಂಧಿ ಗೆ ಇನ್ನೂ ಬುದ್ಧಿ ಬೆಳೆದಿಲ್ಲ. ಹಾಗಾಗಿ ತಮಗೆ ತಿಳಿದಿದ್ದನ್ನು ಮಾತನಾಡುತ್ತಿದ್ದಾರೆ. ರಾಹುಲ್‌ ಕಾಂಗ್ರೆಸ್‌ನಲ್ಲಿ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ಆ ಪಕ್ಷ ಉದ್ಧಾರ ಆಗಲ್ಲ. ಅವರಿಂದಾಗಿಯೇ ಕಾಂಗ್ರೆಸ್‌ ಅಧೋಗತಿಗೆ ಹೋಗುತ್ತಿದೆ ಎಂದರು. ಸಿಎಂ ಎಚ್‌.ಡಿ. ಕುಮಾರಸ್ವಾಮಿ ವಿಧಾನಸೌಧದ 3ನೇ ಮಹಡಿಯಲ್ಲಿ ಇರೋದು ಬಿಟ್ಟು ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ಜನರ ಸಂಕಷ್ಟ ಆಲಿಸುತ್ತಿಲ್ಲ. ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿಯೇ ಸಚಿವರು ಕಚ್ಚಾಟ ಶುರು ಮಾಡಿದ್ದಾರೆ. ಇನ್ನು ಇವರೇನು ಆಡಳಿತ ನಡೆಸುತ್ತಾರೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next