Advertisement

Congress: ‘ನ್ಯಾಯ್‌’ ಯಾತ್ರೆ ನಿಲ್ಲಿಸಿ ತುರ್ತಾಗಿ ವಯನಾಡಿಗೆ ದೌಡಾಯಿಸಿದ ರಾಹುಲ್‌ ಗಾಂಧಿ!

10:07 PM Feb 17, 2024 | Team Udayavani |

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ನ್ಯಾಯ ಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ ತುರ್ತಾಗಿ ಅವರ ಲೋಕಸಭಾ ಕ್ಷೇತ್ರ ಕೇರಳದ ವಯನಾಡಿಗೆ ದೌಡಾಯಿಸಿದ್ದಾರೆ.

Advertisement

ಆನೆ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ವಯನಾಡಿನ ಕುರುವ ದ್ವೀಪದ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಿ ಅಜಿ (42) ಶುಕ್ರವಾರ ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ, ವನ್ಯ ಮೃಗಗಳ ದಾಳಿಯಿಂದ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ವಯನಾಡಿನಾದ್ಯಂತ ಬೃಹತ್‌ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲೇ ರಾಹುಲ್‌ ವಯನಾಡಿಗೆ ದೌಡಾಯಿಸಿದ್ದಾರೆ ಎಂದು ಹೇಳಲಾಗಿದೆ.

ಶನಿವಾರ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ವಯನಾಡಿನಲ್ಲಿ ರಾಹುಲ್‌ ಉಪಸ್ಥಿತಿ ತುರ್ತಾಗಿ ಬೇಕಾಗಿರುವುದರಿಂದ ಅವರು ಸಂಜೆ ವಾರಾಣಸಿಯಿಂದ ತೆರಳುತ್ತಿದ್ದಾರೆ. ಭಾನುವಾರ ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಪ್ರಯಾಗ್‌ ರಾಜ್‌ನಿಂದ ಪುನಾರಂಭವಾಗಲಿದೆ ಎಂದು ಬರೆದಿದ್ದರು. ಇದಕ್ಕೂ ಮುನ್ನ, ಶನಿವಾರ ರಾಹುಲ್‌ ಉ.ಪ್ರದೇಶದ ಕಾಶಿ ವಿಶ್ವ ನಾಥ ದೇಗು ಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next