Advertisement

ಶ್ರೀನಗರದಲ್ಲಿ ಲ್ಯಾಂಡ್‌ ಆದ ಒಂದೇ ಗಂಟೆಯಲ್ಲಿ  ರಾಹುಲ್‌ ಮತ್ತು ತಂಡ ವಾಪಸ್‌!

09:18 AM Aug 25, 2019 | Nagendra Trasi |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕದ ಪರಿಸ್ಥಿತಿ ಅವಲೋಕನಕ್ಕಾಗಿ ಶ್ರೀನಗರಕ್ಕೆ ತೆರಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಇತರ ಪ್ರತಿಪಕ್ಷ ನಾಯಕರ ಯತ್ನ ವಿಫ‌ಲವಾಗಿದೆ.

Advertisement

ಪರಿಸ್ಥಿತಿ ಶಾಂತವಾಗುತ್ತಿರುವ ಈ ಹೊತ್ತಿನಲ್ಲಿ ಭೇಟಿ ನೀಡುವುದು ಬೇಡ ಎಂದು ಸ್ಥಳೀಯಾಡಳಿತ ಹೇಳಿದ್ದರೂ, ನಾಯಕರು ಶ್ರೀನಗರದಲ್ಲಿ ಪರಿಸ್ಥಿತಿ ಅವಲೋಕನಕ್ಕಾಗಿ ಬೆಳಗ್ಗೆ ದಿಲ್ಲಿಯಿಂದ ತೆರಳಿದ್ದರು.

ಈ ತಂಡದಲ್ಲಿ ಗುಲಾಂ ನಬಿ ಆಜಾದ್‌, ಡಿ ರಾಜಾ, ಶರದ್‌ ಯಾದವ್‌, ಮನೋಜ್‌ ಝಾ, ಮಜೀದ್‌ ಮೆಮೋನ್‌ ಮತ್ತಿತರರಿದ್ದರು. ವಿಮಾನದಿಂದ ಇಳಿದಿದ್ದರೂ, ವಿಮಾನ ನಿಲ್ದಾಣದಿಂದ ಹೊರಬರಲು ಅನುಮತಿ ಸಿಗಲಿಲ್ಲ. ಜತೆಗೆ ಬೇರೆ ವಿಮಾನದಲ್ಲಿ ಅವರನ್ನು ವಾಪಸ್‌ ಕಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next