Advertisement

Kasaragod:ಅಪರಾಧ ಸುದ್ದಿಗಳು;‌ ಅಕ್ರಮ ಮೀನುಗಾರಿಕೆ: 3 ಬೋಟ್‌ಗಳು ವಶಕ್ಕೆ

08:19 PM Oct 24, 2024 | Team Udayavani |

ಕಾಸರಗೋಡು: ಕೇರಳದ ಸಮುದ್ರ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ರಾತ್ರಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಕರ್ನಾಟಕದ ಮೂರು ಬೋಟ್‌ಗಳನ್ನು ಕಾಸರಗೋಡು ಸಮುದ್ರ ಕಿನಾರೆಯಿಂದ ಐದು ನಾಟಿಕಲ್‌ ದೂರದಿಂದ ವಶಕ್ಕೆ ಪಡೆಯಲಾಗಿದ್ದು, 7 ಲಕ್ಷ ರೂ. ದಂಡ ವಿಧಿಸಲಾಗಿದೆ.

Advertisement

ಅಣಂಗೂರು: ವಿದ್ಯಾರ್ಥಿ ಸಾವು
ಕಾಸರಗೋಡು: ಅಸೌಖ್ಯದಿಂದ ಬಳಲುತ್ತಿದ್ದ ಕಾಸರಗೋಡು ವಿದ್ಯಾನಗರದ ಚಿನ್ಮಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ, ಅಣಂಗೂರಿನಲ್ಲಿ ವ್ಯಾಪಾರಿಯಾಗಿರುವ ನವೀನ್‌ ಅವರ ಪುತ್ರಿ ಸಾನ್ವಿ ಎನ್‌.ಕೆ.(12) ಸಾವಿಗೀಡಾಗಿದ್ದಾಳೆ.

ನಾಲ್ಕು ತಿಂಗಳುಗಳಿಂದ ಆಕೆ ತೀವ್ರ ಅಸೌಖ್ಯದಲ್ಲಿದ್ದರು. ಈಕೆಯ ತಾಯಿ ಸ್ವಾತಿ ಹಾಗೂ ಸಹೋದರ ಸನ್ವಿತ್‌ ಈ ಹಿಂದೆಯೇ ಸಾವಿಗೀಡಾಗಿದ್ದರು. ಈಗ ಈಕೆಯ ಸಾವಿನ ಮೂಲಕ ಕುಟುಂಬಕ್ಕೆ ದೊಡ್ಡ ಆಘಾತ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next