Advertisement

ರಾಹುಲ್‌ ದ್ರಾವಿಡ್‌ ದೂರು

11:42 AM Mar 19, 2018 | Team Udayavani |

ಬೆಂಗಳೂರು: ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಹಗರಣಕ್ಕೆ ಸಂಬಂಧಿಸಿದಂತೆ  ವಂಚನೆಗೊಳಗಾಗಿರುವ ಖ್ಯಾತ ಕ್ರಿಕೆಟಿಗ ರಾಹುಲ್‌ ಡ್ರಾವಿಡ್‌ ಸದಾಶಿವನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪೆನಿಯಲ್ಲಿ ನಾನು ಇಪ್ಪತ್ತು ಕೋಟಿ ರೂ. ಹೂಡಿಕೆ ಮಾಡಿದ್ದು, ಈ ಪೈಕಿ 16 ಕೋಟಿ ರೂ. ವಾಪಸ್‌ ಆಗಿದೆ. ಇನ್ನುಳಿದ ನಾಲ್ಕು ಕೋಟಿ ರೂ.ಗೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.  

Advertisement

ಈ ಸಂಬಂಧ ಪ್ರಕರಣವನ್ನು ಬನಶಂಕರಿ ಠಾಣೆಗೆ ವರ್ಗಾವಣೆಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಸದಾಶಿವನಗರ ಠಾಣೆಗೆ ಆಗಮಿಸಿದ ರಾಹುಲ್‌ ದ್ರಾವೀಡ್‌ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿಯಲ್ಲಿ ವೆಲ್ತ್‌ ಮ್ಯಾನೆಜರ್‌ ಆಗಿದ್ದ ಸೂತ್ರಂ ಸುರೇಶ್‌ ಕ್ರೀಡಾ ವರದಿಗಾರನಾಗಿದ್ದ ವೇಳೆ ಪರಿಚಿತರಾಗಿದ್ದರು. ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಪಡೆಯಬಹುದು ಎಂದು ನಂಬಿಸಿದ್ದರು.

ಅಂದರಂತೆ ಕಂಪನಿಯ ಕಮಾಡಿಟಿ ಷೇರಿನಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, ಹೆಚ್ಚು ಹಣ ಹಾಕಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಭರವಸೆ ಮೂಡಿಸಿದ್ದರು. ಹೀಗಾಗಿ 20 ಕೋಟಿ ಹೂಡಿಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. 2015ರಲ್ಲಿ ಲಾಂಭಾಂಶ ಎಂದು ಸ್ವಲ್ಪ ಪ್ರಮಾಣದ ಹಣ ನೀಡಿದ್ದರು. 2017ರಿಂದ ಯಾವುದೇ ಲಾಭಾಂಶ ಬಂದಿರಲಿಲ್ಲ. ವ್ಯವಹಾರಿಕವಾಗಿ ಕೆಲ ಸಮಸ್ಯೆಗಳು ಉಂಟಾದರಿಂದ ಲಾಭಾಂಶ ನೀಡಲು ಸಾಧ್ಯವಾಗಿರಲಿಲ್ಲ ಎಂದು ಸೂತ್ರಂ ಸುರೇಶ್‌ ಹೇಳಿದ್ದರು ಎಂದು ದ್ರಾವಿಡ್‌ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next