Advertisement

ಉಪನಾಯಕತ್ವ ವಂಚಿತ ರಾಹುಲ್‌: ಅಶ್ವಿ‌ನ್‌ ಅಥವಾ ಪೂಜಾರ ವೈಸ್‌ ಕ್ಯಾಪ್ಟನ್‌?

11:32 PM Feb 20, 2023 | Team Udayavani |

ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಉಳಿದೆರಡು ಟೆಸ್ಟ್‌ ಪಂದ್ಯಗಳಿಗಾಗಿ ಪ್ರಕಟಗೊಂಡ ಭಾರತ ತಂಡದಲ್ಲಿ ಒಂದು ಅಚ್ಚರಿ ಯನ್ನು ಗಮನಿಸಬಹುದು. ಇದಕ್ಕೆ ಉಪನಾಯಕನನ್ನು ಹೆಸರಿಸಿಲ್ಲ!

Advertisement

ಇಲ್ಲಿಯ ತನಕ ಕೆ.ಎಲ್‌. ರಾಹುಲ್‌ ಈ ಹುದ್ದೆಯಲ್ಲಿದ್ದರು. ಆದರೆ ಅವ ರನ್ನೀಗ ಉಪನಾಯಕನ ಸ್ಥಾನ ದಿಂದ ಕೆಳಗಿಳಿಸಲಾಗಿದೆ. ಇದಕ್ಕೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ. ರಾಹುಲ್‌ ತೀವ್ರ ರನ್‌ ಬರಗಾಲ ದಲ್ಲಿರುವುದೇ ಇದಕ್ಕೆ ಕಾರಣ ಎಂದು ಭಾವಿಸಬಹುದು. ಆದರೂ ಅವರನ್ನು ತಂಡದಲ್ಲಿ ಮುಂದುವರಿಸಲಾಗಿದೆ.

“ಟೆಸ್ಟ್‌ ತಂಡಕ್ಕೆ ಉಪನಾಯಕನನ್ನು ನೇಮಿಸದಿರಲು ನಿರ್ಧರಿಸಲಾಗಿದೆ. ಇಲ್ಲಿ ನಾಯಕ ರೋಹಿತ್‌ ಶರ್ಮ ಅವರಿಗೆ ಸಂಪೂರ್ಣ ಅಧಿಕಾರ ನೀಡ ಲಾಗಿದೆ. ಒಂದು ವೇಳೆ ಅಂಗಳ ದಿಂದ ಹೊರಹೋಗುವ ಸಂದರ್ಭ ಎದುರಾದರೆ ತಂಡವನ್ನು ಯಾರು ಮುನ್ನಡೆಸಬೇಕೆಂದು ಅವರೇ ನಿರ್ಧರಿ ಸುತ್ತಾರೆ’ ಎಂಬುದಾಗಿ ಬಿಸಿಸಿಐ ಮೂಲ ವೊಂದರಿಂದ ತಿಳಿದು ಬಂದಿದೆ.

ಇನ್ನೊಂದು ಮೂಲದ ಪ್ರಕಾರ, 3ನೇ ಟೆಸ್ಟ್‌ ತಂಡದ ಆರಂಭಕ್ಕಿನ್ನೂ 9 ದಿನಗಳಿರುವುದರಿಂದ ಉಪ ನಾಯಕನನ್ನು ನಿಧಾನವಾಗಿ ಹೆಸರಿಸ ಲಾಗುವುದು. ಈಗಿನ ಸಾಧ್ಯತೆಯಂತೆ ಆರ್‌. ಅಶ್ವಿ‌ನ್‌ ಅಥವಾ ಚೇತೇಶ್ವರ್‌ ಪೂಜಾರ ಅವರಿಗೆ ಈ ಜವಾಬ್ದಾರಿ ಲಭಿಸಬಹುದು.

ಹೊಸದಿಲ್ಲಿ ಟೆಸ್ಟ್‌ ಪಂದ್ಯ ಮೂರೇ ದಿನದಲ್ಲಿ ಮುಗಿದ ಬೆನ್ನಲ್ಲೇ ಮುಂದಿನೆರಡು ಟೆಸ್ಟ್‌ ಮತ್ತು ಏಕದಿನ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿತ್ತು.

Advertisement

ಟೆಸ್ಟ್‌ ತಂಡ: ರೋಹಿತ್‌ ಶರ್ಮ (ನಾಯಕ), ಕೆ.ಎಲ್‌. ರಾಹುಲ್‌, ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಕೆ.ಎಸ್‌. ಭರತ್‌, ಇಶಾನ್‌ ಕಿಶನ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಶ್ರೇಯಸ್‌ ಅಯ್ಯರ್‌, ಸೂರ್ಯ ಕುಮಾರ್‌ ಯಾದವ್‌, ಉಮೇಶ್‌ ಯಾದವ್‌, ಜೈದೇವ್‌ ಉನಾದ್ಕತ್‌.

ಏಕದಿನ ತಂಡ: ರೋಹಿತ್‌ ಶರ್ಮ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ಕೆ. ಎಲ್‌. ರಾಹುಲ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಉಮ್ರಾನ್‌ ಮಲಿಕ್‌, ಶಾದೂìಲ್‌ ಠಾಕೂರ್‌, ಅಕ್ಷರ್‌ ಪಟೇಲ್‌, ಜೈದೇವ್‌ ಉನಾದ್ಕತ್‌.

Advertisement

Udayavani is now on Telegram. Click here to join our channel and stay updated with the latest news.

Next