Advertisement

ಎನ್‌ಪಿಎ: ರಾಜನ್‌ ಸಲಹೆ

06:00 AM Aug 20, 2018 | Team Udayavani |

ನವದೆಹಲಿ: ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿಗಳ (ಎನ್‌ಪಿಎ) ಸಮಸ್ಯೆ ಬಗೆಹರಿಸಲು ಸಂಸದೀಯ ಸಮಿತಿಯು ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಸಲಹೆ ಕೇಳಲಿದೆ. ಸಮಿತಿಯ ಮುಂದೆ ಹಾಜರಾಗಿ ಸಮಸ್ಯೆಯ ಕುರಿತು ಮಾಹಿತಿ ನೀಡುವಂತೆ ರಾಜನ್‌ ಅವರಿಗೆ ಬಿಜೆಪಿಯ ಹಿರಿಯ ಸಂಸದ ಮುರಳಿ ಮನೋಹರ್‌ ಜೋಶಿ ನೇತೃತ್ವದ ಸಮಿತಿ ಆಹ್ವಾನಿಸಿದೆ. ಎನ್‌ಪಿಎ ಬಿಕ್ಕಟ್ಟನ್ನು ಗುರುತಿಸುವಲ್ಲಿ ಹಾಗೂ ಪರಿಹರಿ ಸುವಲ್ಲಿ ರಾಜನ್‌ ವಹಿಸಿದ್ದ ಪಾತ್ರವನ್ನು ಇತ್ತೀಚೆಗಷ್ಟೇ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ್‌ ಸುಬ್ರಮಣಿಯನ್‌ ಅವರು ಇದೇ ಸಮಿತಿಯ ಮುಂದೆ ಶ್ಲಾಘಿಸಿದ್ದರು. 2016ರ ಸೆಪ್ಟೆಂಬರ್‌ ತನಕ 3 ವರ್ಷಗಳ ಕಾಲ ರಾಜನ್‌ ಆರ್‌ಬಿಐ ಗವರ್ನರ್‌ ಆಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next