Advertisement

ರಾಜ್ಯಸಭಾ ಸದಸ್ಯತ್ವದ ಆಪ್‌ ಕೊಡುಗೆ ತಿರಸ್ಕರಿಸಿದ ರಾಜನ್‌

11:03 AM Nov 09, 2017 | udayavani editorial |

ಹೊಸದಿಲ್ಲಿ : ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷ ನೀಡಿರುವ ರಾಜ್ಯಸಭಾ ಸ್ಥಾನದ ಕೊಡುಗೆಯನ್ನು  ಮಾಜಿ ಆರ್‌ಬಿಐ ಗವರ್ನರ್‌ ನಯವಾಗಿ ತಿರಸ್ಕರಿಸಿದ್ದಾರೆ. 

Advertisement

ಪೂರ್ಣ ಕಾಲೀನ ಅಧ್ಯಾಪನ ಹುದ್ದೆಯನ್ನು ತೊರೆಯುವ ಯಾವುದೇ ಆಲೋಚನೆ ಸದ್ಯಕ್ಕೆ ತನ್ನಲ್ಲಿ ಇಲ್ಲ ಎಂದು ರಘುರಾಮ ರಾಜನ್‌ ಹೇಳಿದ್ದಾರೆ. 

ರಾಜನ್‌ ಪರವಾಗಿ ಶಿಕಾಗೋ ವಿವಿಯ ಬೂತ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌, “ಪ್ರೊಫೆಸರ್‌ ರಾಜನ್‌ ಅವರು ಪ್ರಕೃತ ಭಾರತದಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಶಿಕಾಗೋ ವಿಶ್ವವಿದ್ಯಾಲಯದಲ್ಲಿನ ತಮ್ಮ ಪೂರ್ಣ ಕಾಲಿಕ ಅಧ್ಯಾಪಕ ಉದ್ಯೋಗವನ್ನು ತೊರೆಯುವ ಯಾವುದೇ ಆಲೋಚನೆ ಅವರಲ್ಲಿ ಇಲ್ಲ’ ಎಂದು ಹೇಳಿದೆ. 

ಮುಂದಿನ ವರ್ಷ ಜನವರಿಯಲ್ಲಿ ತೆರವಾಗುವ ದಿಲ್ಲಿಯ ಮೂರು ರಾಜ್ಯಸಭಾ ಸ್ಥಾನಗಳಿಗೆ ಆಮ್‌ ಆದ್ಮಿ ಪಕ್ಷ ಹೊರಗಿನ ಮಹತ್ವದ ವ್ಯಕ್ತಿಗಳನ್ನು ನಾಮಕರಣ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ನಿನ್ನೆ ಬುಧವಾರ ತಿಳಿಸಿದ್ದವು. 

ಅಂತೆಯೇ ಈ ಮೂರರಲ್ಲಿ ಒಂದು ರಾಜ್ಯಸಭಾ ಸ್ಥಾನಕ್ಕೆ ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ ರಾಜನ್‌ ಅವರ ಹೆಸರನ್ನು ಆಪ್‌ ಸೂಚಿಸುವ ಸಾಧ್ಯತೆ ಇತ್ತೆಂದು ವರದಿಯಾಗಿತ್ತು. 

Advertisement

ರಾಜನ್‌ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನಾಮಕರಣ ಮಾಡುವ ಕುರಿತು ಆಮ್‌ ಆದ್ಮಿ ಪಕ್ಷ ತನ್ನ ಸಭೆಯಲ್ಲಿ ಚರ್ಚಿಸಿತ್ತು. ಅಂತೆಯೇ ಅದು ರಾಜನ್‌ ಗೆ ಈ ಸಂಬಂಧ ಅಧಿಕೃತ ಇ-ಮೇಲ್‌ ರವಾನಿಸಿತ್ತು; ರಾಜನ್‌ ಇದಕ್ಕೆ ಧನಾತ್ಮಕವಾಗಿ ಉತ್ತರಿಸುವರೆಂಬ ನಿರೀಕ್ಷೆ ಆಪ್‌ಗೆ ಇತ್ತು. 

ಆರ್‌ಬಿಐ ಗವರ್ನರ್‌ ಹುದ್ದೆಯಿಂದ ಇಳಿದ ಬಳಿಕ ರಾಜನ್‌ ಅವರ ಹೆಸರು ನೊಬೆಲ್‌ ಅರ್ಥಶಾಸ್ತ್ರ ಪಾರಿತೋಷಕಕ್ಕೆ ಸೂಚಿಸಲ್ಪಟ್ಟಿರುವುದಾಗಿ ವರದಿಯಾಗಿತ್ತು. ಅನಂತರ ರಾಜನ್‌ ಅವರ ಹೆಸರನ್ನು ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಮುಖ್ಯಸ್ಥನ ಹುದ್ದೆಗೆ ಬ್ಯಾರನ್‌ ಸಂಸ್ಥೆ ಶಿಫಾರಸು ಮಾಡಿರುವುದಾಗಿ ವರದಿಯಾಗಿತ್ತು. ಹಾಗಾಗಿ ರಾಜನ್‌ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿತ್ತು. 

ಇಂಟರ್‌ನ್ಯಾಶನಲ್‌ ಮಾನಿಟರಿ ಫ‌ಂಡ್‌ (ಐಎಂಎಫ್) ಇದರ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ರಾಜನ್‌, 1992ರ ಬಳಿಕದಲ್ಲಿ ಆರ್‌ಬಿಐ ಗವರ್ನರ್‌ ಆಗಿ ಐದು ವರ್ಷಗಳ ಅವಧಿ ಪೂರೈಸಿದ ಮೊದಲ ಗವರ್ನರ್‌ ಎನಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next