Advertisement

ರಾಧಾಕೃಷ್ಣ ರಾವ್‌ ಪೆರೋಡಿ ದಂಪತಿಗೆ ಸಮ್ಮಾನ

12:25 PM May 29, 2018 | Team Udayavani |

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಮಂಗಳೂರು ಮತ್ತು ಸಪ್ತಕ ಬೆಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ಕೊಡಿಯಾಲಬೈಲ್‌ನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆದ ಸ್ವರ-ಧಾರಾ ಎಂಬ ಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ತಾನೀ ಸಂಗೀತ ಕ್ಷೇತ್ರಕ್ಕೆ ಕಳೆದ ಎರಡು ದಶಕಗಳಿಂದ ಸಂಘಟನಾತ್ಮಕ ನೆಲೆಯಲ್ಲಿ ಸೇವೆ ಸಲ್ಲಿಸಿರುವ ಸಂಗೀತ ಭಾರತಿ ಪ್ರತಿಷ್ಠಾನದ ಸ್ಥಾಪಕ ಕಾರ್ಯದರ್ಶಿ ರಾಧಾಕೃಷ್ಣ ರಾವ್‌ ಪೆರೋಡಿ ಮತ್ತು ಲತಾ ಆರ್‌. ಪೆರೋಡಿ ಅವರನ್ನು ಸಂಗೀತ ಭಾರತಿ ಪ್ರತಿಷ್ಠಾನದ ಪರವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಪಂ| ವಿಶ್ವ ಮೋಹನ್‌ ಭಟ್‌ ಅವರು ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು.

Advertisement

ವೇದಿಕೆಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್‌ ರಫೀಕ್‌ ಖಾನ್‌, ಉಪಾಧ್ಯಕ್ಷ ನರೇಂದ್ರ ಎಲ್‌. ನಾಯಕ್‌, ಕಾರ್ಯದರ್ಶಿ ಉಷಾಪ್ರಭಾ ಎನ್‌. ನಾಯಕ್‌, ಟ್ರಸ್ಟಿ ಶೋಭಾ ನಾಯಕ್‌, ಯುವ ಸಿತಾರ್‌ ವಾದಕ ಅಂಕುಶ್‌ ಎನ್‌. ನಾಯಕ್‌, ಎಕ್ಸ್‌ಪರ್ಟ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು ಮತ್ತು ಹೇಮಂತ್‌ ರಾವ್‌ ಪೆರೋಡಿ ಉಪಸ್ಥಿತರಿದ್ಧರು.

ಸ್ವರ-ಧಾರಾದಲ್ಲಿ ಮುಂಬಯಿಯ ಧನಂಜಯ ಹೆಗಡೆ ಶಾಸ್ತ್ರೀಯ ಗಾಯನ ಪ್ರಸ್ತುತ ಪಡಿಸಿದರು. ತಬಲಾ
ದಲ್ಲಿ ಮುಂಬಯಿಯ ವಿಶ್ವನಾಥ್‌ ಶಿರೋಡ್ಕರ್‌ ಹಾಗೂ ಹಾರ್ಮೋ ನಿಯಂನಲ್ಲಿ ನರೇಂದ್ರ ಎಲ್‌. ನಾಯಕ್‌ ಸಾಥ್‌ ನೀಡಿದರು. ಪಂ| ವಿಶ್ವ ಮೋಹನ್‌ ಭಟ್‌ ಅವರಿಂದ ಮೋಹನ ವೀಣಾ ಕಛೇರಿ ನಡೆಯಿತು. ತಬಲಾದಲ್ಲಿ ಬರೋಡದ ಕಲಾವಿದ ಹಿಮಾಂಶು ಮಹಾಂತ ಅವರು ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next