Advertisement

“ಆದೇಶ ಪ್ರತಿ ರವಾನೆ ವಿಳಂಬ ಸಮಸ್ಯೆ ಶೀಘ್ರ ಬಗೆಹರಿಯಲಿ’

12:34 AM Nov 04, 2021 | Team Udayavani |

ಹೊಸದಿಲ್ಲಿ: ಜಾಮೀನು ಆದೇಶದ ಪ್ರತಿಯಲ್ಲಿ ಜೈಲಧಿಕಾರಿಗಳಿಗೆ ಸಲ್ಲಿಸುವಲ್ಲಿ ಆಗುತ್ತಿರುವ ವಿಳಂಬವು “ಅತ್ಯಂತ ಗಂಭೀರ ಲೋಪ’ವಾಗಿದೆ. ಈ ಸಮಸ್ಯೆಗೆ ಸಂಬಂಧಿಸಿ ಯುದ್ದೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹೇಳಿದ್ದಾರೆ.

Advertisement

ಅಲಹಾಬಾದ್‌ ಹೈಕೋರ್ಟ್‌ ಆಯೋಜಿಸಿದ್ದ ವರ್ಚುವಲ್‌ ಕೋರ್ಟ್‌ ಮತ್ತು ಇ-ಸೇವಾ ಕೇಂದ್ರಗಳ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, “ಆದೇಶಗಳ ಪ್ರತಿಯು ವಿಳಂಬವಾಗಿ ಜೈಲಧಿಕಾರಿಗಳ ಕೈಸೇರುತ್ತಿರುವ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕಾಗಿದೆ. ಇದು ಪ್ರತಿಯೊಬ್ಬ ವಿಚಾರಣಾಧೀನ ಕೈದಿಯ “ಸ್ವಾತಂತ್ರ್ಯ’ಕ್ಕೆ ಸಂಬಂಧಿಸಿದ ವಿಚಾರವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ಬಿಜೆಪಿ ನಾಯಕರ ಟೀಕೆಗಳಿಗೆ ಉಪ ಚುನಾವಣೆ ಫ‌ಲಿತಾಂಶ ಉತ್ತರ ಕೊಟ್ಟಿದೆ: ಡಿಕೆಶಿ

ಈ ಹಿಂದೆ ಸಿಜೆಐ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ಕೂಡ ಈ ಸಮಸ್ಯೆ ಕುರಿತು ಬೆಳಕು ಚೆಲ್ಲಿತ್ತು. ಆದೇಶಗಳ ಪ್ರತಿಯನ್ನು ರವಾನಿಸಲು ನಾವು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಪಷ್ಟ ಮಾಧ್ಯಮವೊಂದನ್ನು ಸ್ಥಾಪಿಸಲಿದ್ದೇವೆ ಎಂದು ಹೇಳಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next