Advertisement

ಕಂಬಳ ಮಸೂದೆಗೆ ಶೀಘ್ರ ರಾಷ್ಟ್ರಪತಿಗಳ ಅಂಕಿತ: ಸಚಿವ ಡಿವಿ

11:22 AM Dec 04, 2017 | Team Udayavani |

ಮಂಗಳೂರು: ಕಂಬಳ ಮಸೂದೆಗೆ  ಶೀಘ್ರ ರಾಷ್ಟ್ರಪತಿಗಳ ಅಂಕಿತ ಬೀಳುವ ನಿರೀಕ್ಷೆ ಇದೆ. ಕಂಬಳಕ್ಕೆ ಧಕ್ಕೆಯಾಗದಂತೆ ಪ್ರತಿ ಹೆಜ್ಜೆಯಲ್ಲೂ ಎಲ್ಲಾ ರಾಜಕಾರಣಿಗಳೂ ಪಕ್ಷಬೇಧ ಮರೆತು ಶ್ರಮಿಸುತ್ತೇವೆ ಎಂದು ಕೇಂದ್ರ ಅಂಕಿ ಅಂಶಗಳ ಸಚಿವ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.

Advertisement

ನಗರದ ಬಂಗ್ರಕೂಳೂರು ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ರವಿವಾರ ಆಯೋಜಿಸಲಾದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಂಬಳ  ತುಳುನಾಡಿನ ಸಾಂಸ್ಕೃತಿಕ ಮತ್ತು  ಜಾನಪದ ಕ್ರೀಡೆ .ಅದರ ಉಳಿವಿಗೆ ಕಾನೂನು ಜಾರಿಯಾಗಿಯೇ ಆಗುತ್ತೆ ಎಂದರು. 

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಂಬಳ ನಮ್ಮ ಸಂಸ್ಕತಿ, ಇದನ್ನು  ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು. ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆ ವಹಿಸಿದ್ದರು. 

ಸಚಿವ ಮಂಜು ಭೇಟಿ
 ರಾಜ್ಯ ಪಶುಸಂಗೋಪನಾ ಸಚಿವ ಕೆ.ಮಂಜು ಕಂಬಳಕ್ಕೆ  ಭೇಟಿ ನೀಡಿದರು. ಕಂಬಳ ಉಳಿವಿಗಾಗಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡುತ್ತೇವೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next