Advertisement

ಹರಪನಹಳ್ಳಿ ಶಿರಸ್ತೇದಾರ್‌ಗೆ ಕ್ವಾರಂಟೈನ್‌

08:19 AM Jun 11, 2020 | Suhan S |

ಹರಪನಹಳ್ಳಿ: ಪಟ್ಟಣದ ಮಿನಿ ವಿಧಾನಸೌಧ ತಹಶೀಲ್ದಾರ್‌ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸ್ತೇದಾರ್‌ ಅವರ ಪುತ್ರನಿಗೆ ಕೋವಿಡ್ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಶಿರಸ್ತೇದಾರರನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿದೆ.

Advertisement

ಸ್ಥಳೀಯ ಶಿರಸ್ತೇದಾರ್‌ ಅವರ ಪುತ್ರ ಬಳ್ಳಾರಿಯ ಜಿಂದಾಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿರುವ ಎಲ್ಲಾ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಿದ ವೇಳೆ ಶಿರಸ್ತೇದಾರ್‌ ಅವರ ಪುತ್ರನ ವರದಿ ಪಾಸಿಟಿವ್‌ ಬಂದಿದೆ. ಶಿರಸ್ತೇದಾರರು ವಾರಕೊಮ್ಮೆ ತಮ್ಮ ಬಳ್ಳಾರಿ ನಿವಾಸಕ್ಕೆ ಹೋಗಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ರವಾನಿಸಲಾಗಿದೆ.

ಪಟ್ಟಣದ ಮಿನಿ ವಿಧಾನಸೌಧ ತಹಶೀಲ್ದಾರ್‌ ಕಚೇರಿಯಲ್ಲಿ ಶಿರಸ್ತೇದಾರ್‌ ಅವರು ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ಬುಧವಾರ ಸೋಂಕು ನಿವಾರಕ ಔಷಧ ಸಿಂಪಡಣೆ ಮಾಡಲಾಗಿದೆ. ಶಿರಸ್ತೇದಾರ ಪರೀಕ್ಷಾ ವರದಿ 5 ದಿನಕ್ಕೆ ಬರಲಿದ್ದು, ಒಂದು ವೇಳೆ ಅವರ ವರದಿ ಪಾಸಿಟಿವ್‌ ಎಂದು ಬಂದರೆ ಮಾತ್ರ ನಮ್ಮ ಕಚೇರಿಯ ಎಲ್ಲಾ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಹಶೀಲ್ದಾರ್‌ ಡಾ|ನಾಗವೇಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next