Advertisement

Kasaragod: ಇಂದು ಖಾಸಗಿ ಬಸ್‌ ಮುಷ್ಕರ

12:37 AM Oct 31, 2023 | Team Udayavani |

ಕಾಸರಗೋಡು: ಖಾಸಗಿ ಬಸ್‌ ಮಾಲಕರ ಸಂಘಟನೆಯ ಅಧ್ಯಕ್ಷ ಕೆ.ಕೆ. ಥಾಮಸ್‌ ಅವರ ನಿರಾಹಾರ ಸತ್ಯಾಗ್ರಹಕ್ಕೆ ಸಂಬಂಧಿಸಿ ನಡೆದ ಚರ್ಚೆಯ ಸಂದರ್ಭ ಸಾರಿಗೆ ಸಚಿವರು ನೀಡಿದ್ದ ಭರವಸೆಗಳನ್ನು ಜಾರಿಗೊಳಿಸದೆ ಏಕಪಕ್ಷೀಯವಾಗಿ ಬಡವರಿಗೆ ಉಚಿತ ಪ್ರಯಾಣ ಘೋಷಿಸಿರುವ ಕ್ರಮವನ್ನು ವಿರೋಧಿಸಿ ಅ. 31ರಂದು ರಾಜ್ಯವ್ಯಾಪಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಬಸ್‌ ಮಾಲಕರ ಸಂಘ ತೀರ್ಮಾನಿಸಿದೆ.

Advertisement

ಜಂಟಿ ಮುಷ್ಕರ ಸಮಿತಿ ಮುಂದಿಟ್ಟ ಬೇಡಿಕೆ ಗಳನ್ನು ಆಂಗೀಕರಿಸದಿದ್ದರೆ ನ. 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವು ದೆಂದು ತಿಳಿಸಲಾಗಿದೆ.

ವಿದ್ಯಾರ್ಥಿ ಪ್ರಯಾಣ ದರವನ್ನು ಹೆಚ್ಚಿಸ ಬೇಕೆಂದು ಹಲವು ವರ್ಷಗಳಿಂದ ನಿರಂತರ ಬೇಡಿಕೆ ಮುಂದಿಡುತ್ತಿದ್ದರೂ ಸರಕಾರ ಈವರೆಗೂ ಹೆಚ್ಚಳ ಮಾಡಿಲ್ಲ ಎಂಬುದು ಬಸ್‌ ಮಾಲಕರ ಪ್ರಮುಖ ಆರೋಪ.

ಬಸ್‌ಗಳಲ್ಲಿ ಕೆಮರಾ, ಸೀಟ್‌ ಬೆಲ್ಟ್ ಕಡ್ಡಾಯ ಅಳವಡಿಸ ಬೇಕು ಎಂಬ ನಿಯಮನ್ನು ಕೈಬಿಡ ಬೇಕು. 140 ಕಿ.ಮೀ. ದೂರಮಿತಿ ನೋಡದೆ ಎಲ್ಲ ಬಸ್‌ಗಳ ಪರವಾನಿಗೆ ನವೀಕರಿಸಬೇಕು ಮೊದಲಾದ ಬೇಡಿಕೆಗಳನ್ನು ಸಂಘವು ಮುಂದಿರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next