Advertisement
ಘಾಟಿ ಹತ್ತುವ ಉದ್ದೇಶದಿಂದ ಸುಬ್ರಹ್ಮಣ್ಯದಲ್ಲಿ ರೈಲಿಗೆ ಹೆಚ್ಚುವರಿ ಎಂಜಿನ್ನನ್ನು ಬೋಗಿ ಹಿಂಭಾಗದಿಂದ ಸೇರಿಸಲಾಗುತ್ತದೆ. ಮಂಗಳವಾರ ಇದರಿಂದ ಪ್ರಯೋಜನವೇ ಆಯಿತು. ಒಂದು ವೇಳೆ ಹಿಂಭಾಗದಲ್ಲಿ ಎಂಜಿನ್ ಇಲ್ಲದೇ ಇರುತ್ತಿದ್ದರೆ, ಮಣ್ಣು- ಬಂಡೆ ತೆರವು ಮಾಡುವವರೆಗೆ ರೈಲು ಸ್ಥಳದಲ್ಲೇ ನಿಲ್ಲಬೇಕಾಗಿತ್ತು. ಅಥವಾ ಸುಬ್ರಹ್ಮಣ್ಯ ಅಥವಾ ಮಂಗಳೂರಿನಿಂದ ಇನ್ನೊಂದು ಎಂಜಿನ್ ತಂದು ರೈಲನ್ನು ಹಿಂದೆ ಎಳೆಯಬೇಕಾಗಿತ್ತು.
ರೈಲು ಮಂಗಳೂರು ಕಡೆ ಸಾಗಿತು. 9 ಕೆಎಸ್ಆರ್ಟಿಸಿ ಬಸ್
ಸಂಜೆ 5.30ರಿಂದ ಸುಮಾರು 8 ಗಂಟೆವರೆಗೆ ಪ್ರಯಾಣಿಕರು ಪುತ್ತೂರು ರೈಲ್ವೇ ನಿಲ್ದಾಣದ ಆಸುಪಾಸು ಎಲ್ಲೆಂದರಲ್ಲಿ ಕುಳಿತಿದ್ದರು. ಸಣ್ಣ ಮಕ್ಕಳ ಅಳು, ದೊಡ್ಡವರ ಜಗಳ, ಕೆಲಸಕ್ಕೆಂದು ಹೊರಟು ನಿಂತವರ ತೊಳಲಾಟ ಎಲ್ಲವೂ ಸಾಮಾನ್ಯವಾಗಿ ಕಂಡುಬಂತು. ರೈಲ್ವೇ ಇಲಾಖೆ ವತಿಯಿಂದ ಪ್ರಯಾಣಿಕರಿಗಾಗಿ 9 ಕೆಎಸ್ಆರ್ಟಿಸಿ ಬಸ್ಗಳನ್ನು ಗೊತ್ತು ಪಡಿಸಲಾಯಿತು. ಇದರಲ್ಲಿ 2 ಬಸ್ ಸಕಲೇಶಪುರ – ಹಾಸನ, ಉಳಿದ ಬಸ್ ಗಳು ಬೆಂಗಳೂರಿಗೆ.
Related Articles
Advertisement
ಸಿಕ್ಕಿಬಿದ್ದೆವು…ಪುತ್ತೂರಿನಿಂದ ಬೆಂಗಳೂರಿಗೆ ಹೊರಟಿದ್ದೆ. 15 ನಿಮಿಷ ಬೇಗ ಹೋಗುತ್ತಿದ್ದರೂ ರೈಲು ಎಡಕುಮೇರಿಯಿಂದ ಮುಂದೆ
ಹೋಗಿರುತ್ತಿತ್ತು. ಈಗ ಅರ್ಧದಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ. ಗುಡ್ಡ- ಬಂಡೆ ರೈಲಿನ ಮೇಲೆ ಬಿದ್ದಿರುತ್ತಿದ್ದರೆ ದೊಡ್ಡ ದುರಂತವೇ ನಡೆಯುತ್ತಿತ್ತು. ಮಧ್ಯಾಹ್ನದ ಬಳಿಕ ಒದ್ದಾಟ ನಡೆಸುವಂತಾಗಿದೆ. ನುಸಿ ಕಚ್ಚಿಸಿಕೊಂಡು ರೈಲ್ವೇ ನಿಲ್ದಾಣದಲ್ಲಿ ಕುಳಿತುಕೊಂಡಿದ್ದೇವೆ.
– ಸದಾಶಿವ,
ಗೋಳಿತ್ತಡಿ, ರೈಲ್ವೇ ಪ್ರಯಾಣಿಕ