Advertisement

Jyothi ನಿಲ್ದಾಣ: ಬಸ್‌ ಬೇ ಕಾಮಗಾರಿ ಆರಂಭ

08:36 AM Sep 06, 2024 | Team Udayavani |

ಜ್ಯೋತಿ: ಜ್ಯೋತಿ ಬಸ್‌ ನಿಲ್ದಾಣದ ಬಳಿ ಬಸ್‌ ಬೇ ನಿರ್ಮಾಣ ಕಾಮಗಾರಿ ಗುರುವಾರ ಆರಂಭಗೊಂಡಿದೆ.

Advertisement

ಬಂಟ್ಸ್‌ ಹಾಸ್ಟೆಲ್‌ ಕಡೆಯಿಂದ ಜ್ಯೋತಿ (ಅಂಬೇಡ್ಕರ್‌ ವೃತ್ತ) ಕಡೆಗೆ ಹೋಗುವ ಬಸ್‌ ಗಳು ನಿಲುಗಡೆಯಾಗುವ ಸ್ಥಳದಲ್ಲಿ ರಸ್ತೆ ಮತ್ತು ಬಸ್‌ ಶೆಲ್ಟರ್‌ ನಡುವೆ ಖಾಲಿ ಜಾಗವಿದ್ದರೂ ನಿಲ್ಲುತ್ತದೆ. ಬಸ್‌ಗಳು ನಿಲುಗಡೆಯಾಗದೆ ರಸ್ತೆಯಲ್ಲೇ ನಿಲುಗಡೆಯಾಗುತ್ತಿವೆ. ಖಾಲಿ ಜಾಗದಲ್ಲಿ ಆಟೋರಿಕ್ಷಾಗಳು, ಇತರ ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ರಸ್ತೆಯ ಮೇಲೆಯೇ ಅಪಾಯಕಾರಿಯಾಗಿ ಬಸ್‌ ಹತ್ತುಬೇಕು, ಇಳಿಯಬೇಕು. ಮಾತ್ರವಲ್ಲದೆ, ಬಸ್‌ಗಳು ರಸ್ತೆಯಲ್ಲೇ ನಿಲ್ಲುವುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ. ಈ ಬಗ್ಗೆ “ಉದಯವಾಣಿ ಸುದಿನ’ದಲ್ಲಿ ಜೂ. 21ರಂದು “ಬಳಕೆಯಾಗದ ಬಸ್‌ ಬೇ ಜಾಗ’ ಎಂಬ ಶೀರ್ಷಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next